ಎ.ಒ.ಎಲ್.ಇ ಕಮಿಟಿ ಬಿ ವಿದ್ಯಾಸಂಸ್ಥೆಗಳ ವತಿಯಿಂದ ಗಣಪತಿ ಹವನ, ಆಯುಧ ಪೂಜೆ, ಶಾರದಾಪೂಜೆ

0

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ವತಿಯಿಂದ ಗಣಪತಿ ಹವನ, ಆಯುಧ ಪೂಜೆ, ಶಾರದಾಪೂಜೆ ಅ. 11ರಂದು ಕೆವಿಜಿ ಐಪಿಎಸ್ ಆವರಣದಲ್ಲಿ ಪುರೋಹಿತ ನಾಗರಾಜ ಭಟ್ಟರ ನೇತೃತ್ವದಲ್ಲಿ ನಡೆಯಿತು.


ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ, ಕಾರ್ಯದರ್ಶಿ ಡಾ. ಜ್ಯೋತಿ ಆರ್. ಪ್ರಸಾದ್, ನಿರ್ದೇಶಕರಾದ ಮೌರ್ಯ ಆರ್. ಕರುಂಜಿ, ಕಮಿಟಿ ಬಿ ವಿದ್ಯಾಸಂಸ್ಥೆಗಳ ಸಿಇಒ ಡಾ. ಉಜ್ವಲ್ ಯು.ಜೆ, ವಿದ್ಯಾಸಂಸ್ಥೆಗಳ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಎಸ್.ಎನ್. ಮನ್ಮಥ, ಎನ್.ಎ. ರಾಮಚಂದ್ರ, ದೀಪಕ್ ಕುತ್ತಮೊಟ್ಟೆ, ಸಂತೋಷ್ ಜಾಕೆ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ ಸೇರಿದಂತೆ ಕಮಿಟಿ ಬಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಮುಖ್ಯಸ್ಥರು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ಎ.ಒ.ಎಲ್.ಇ ಪ್ರಧಾನ ಕಚೇರಿಯಲ್ಲಿ ಗಣಪತಿ ಹವನ ನಡೆದು ಬಳಿಕ ವಿವಿಧ ವಿದ್ಯಾಸಂಸ್ಥೆಗಳಲ್ಲಿ ಆಯುಧ ಪೂಜೆ ನೆರವೇರಿತು. ಶ್ರೀ ಗುರುರಾಘವೇಂದ್ರ ಭಜನಾ ತಂಡ ಇಲ್ಲಿಯ ವಿದ್ಯಾರ್ಥಿಗಳಿಂದ ಭಜನಾ ಸಂಕೀರ್ತನೆ, ಶಾರದಾ ಪೂಜೆ, ಮಧ್ಯಾಹ್ನ ಮಹಾಮಂಗಳಾರತಿ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು.