ದೇವರಕೊಲ್ಲಿ: ಕಾರು – ಲಾರಿ ಅಪಘಾತ : ಜಖಂ

0

ಬ್ರೇಕ್ ವೈಪಲ್ಯದಿಂದ ಲಾರಿಗೆ ಢಿಕ್ಕಿ ಹೊಡೆದ ಕಾರು – ಪ್ರಯಾಣಿಕರು ಅಪಾಯದಿಂದ ಪಾರು

ಬ್ರೇಕ್ ವೈಫಲ್ಯಗೊಂಡ ಕಾರಣದಿಂದಾಗಿ ಕಾರೊಂದು ಲಾರಿಗೆ ಢಿಕ್ಕಿ ಹೊಡೆದು, ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಮದೆ ಗ್ರಾಮದ ದೇವರಕೊಲ್ಲಿಯಲ್ಲಿ ಅ.8ರಂದು ಸಂಜೆ ಸಂಭವಿಸಿದೆ.

ಪುತ್ತೂರಿನಿಂದ ಕೊಡಗಿನ ಎಮ್ಮೆಮಾಡಿಗೆ ತೆರಳುತ್ತಿದ್ದ ಕಾರು ದೇವರಕೊಲ್ಲಿ ತಲುಪಿದಾಗ ಬ್ರೇಕ್ ವೈಫಲ್ಯ ಸಂಭವಿಸಿ, ಮುಂಭಾಗದಲ್ಲಿ ಮಡಿಕೇರಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿಗೆ ಢಿಕ್ಕಿ ಢಿಕ್ಕಿ ಹೊಡೆದಿದ್ದು, ಕಾರಿನ ಒಂದು ಬದಿ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.
ಕಾರಿನಲ್ಲಿ ನಾಲ್ವರು ಪ್ರಯಾಣಿಕರಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ.