ಸಂಪಾಜೆ: ಕಡಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತ

0

ಮರ ತೆರವುಗೊಳಿಸಿ ವಾಹನ ಸಂಚಾರ ಮರು ಆರಂಭ

ದ.ಕ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕಡಪಾಲ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಕೆಲ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಅ.12 ರಂದು ರಾತ್ರಿ ಸಂಭವಿಸಿದೆ.

ಕೂಡಲೇ ಗ್ರಾಮಸ್ಥರು, ಸ್ಥಳೀಯರು ಆಗಮಿಸಿ ಮರವನ್ನು ಯಂತ್ರದ ಮೂಲಕ ಕಟ್ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಇದೀಗ ವಾಹನ ಸಂಚಾರ ಮರು ಆರಂಭಗೊಂಡಿರುವುದಾಗಿ ತಿಳಿದುಬಂದಿದೆ.
ಮರ ಬಿದ್ದ ಹಿನ್ನೆಲೆಯಲ್ಲಿ ಕೆಲಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಈ ಸಂದರ್ಭದಲ್ಲಿ ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯ ಸಹಾಯಕ ಉಪ ನಿರೀಕ್ಷಕರಾದ ತಾರಾನಾಥ್, ಸಿಬ್ಬಂದಿ ವರ್ಗ,ಹಾಗೂ ಮಂಜುನಾಥ್ , ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಸದಸ್ಯರಾದ ಶೌವಾದ್ ಗೂನಡ್ಕ, ರಿಯಾಝ್ ಟಿ.ಎ., ಶೇಖರ ಕಡಪಾಲ ,ಯಶೋಧರ ಕಡಪಾಲ, ಗುರುವಪ್ಪ ಕಡೆಪಾಲ, ಜಗ್ಗ ಕಡಪಾಲ, ಪುನೀತ್ ಕಡಪಾಲ, ಜಿತೇಶ್, ದೇವರಾಜ್, ಸಹಕರಿಸಿದರು.