ಶ್ರೀ ಶಾರದಾಂಬ ದಸರಾ -2024

0

ಉತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅವರಿಂದ ಮಕ್ಕಳ ದಸರಾ ಮೆರವಣಿಗೆಗೆ ಚಾಲನೆ

ಸುಳ್ಯದ ಪ್ರಪ್ರಥಮ ಮಕ್ಕಳ ದಸರಾ ಉದ್ಘಾಟನೆ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ಇದರ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ ಕಾರ್ಯಕ್ರಮದಲ್ಲಿ ಮಕ್ಕಳ ದಸರಾ -2024 ಕಾರ್ಯಕ್ರಮವು ಜರುಗುತ್ತಿದ್ದು, ಅ.13ರಂದು ಬೆಳಿಗ್ಗೆ ಮಕ್ಕಳ ದಸರಾ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿತು.

ಸುಳ್ಯ ಬಸ್ ನಿಲ್ದಾಣದಲ್ಲಿ ಶ್ರೀ ಶಾರದಾಂಬ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಕೃಷ್ಣ ಕಾಮತ್ ಅರಂಬೂರು ಅವರು ಬ್ಯಾಂಡ್ ಬಡಿಯುವುದರ ಮೂಲಕ ಮಕ್ಕಳ ದಸರಾ – 2024ಕ್ಕೆ ಚಾಲನೆ ನೀಡಿದರು.

ಬಸ್ ನಿಲ್ದಾಣದಲ್ಲಿ ತಾಲೂಕಿನ ವಿವಿಧೆಡೆಯ ನೂರಾರು ಮಕ್ಕಳು ಸೇರಿ ಮೆರವಣಿಗೆಯ ಮೂಲಕ ಶ್ರೀ ಶಾರದಾಂಬ ಕಲಾವೇದಿಕೆಯ ವರೆಗೆ ಸಾಗಿ ಬಂದರು.

ಇದೀಗ ಮಕ್ಕಳಿಗೆ ಭಾವಗೀತೆ, ಭಕ್ತಿಗೀತೆ, ಛದ್ಮವೇಷ ಸ್ಪರ್ಧೆ, ಸಮೂಹ ನೃತ್ಯ, ಜನಪದಗೀತೆ, ಭರತನಾಟ್ಯ, ಡ್ರಾಯಿಂಗ್ ಗೂಡುದೀಪ ಸ್ಪರ್ಧೆ, ಲಕ್ಕಿಗೇಮ್ ಸೇರಿದಂತೆ ವಿವಿಧ ಸ್ಪರ್ಧಾ ಕಾರ್ಯಕ್ರಮವು ಆರಂಭಗೊಂಡಿದೆ. ಸುಮಾರು ನೂರಕ್ಕೂ ಅಧಿಕ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು , ಮಹಿಳಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.