ಮುರುಳ್ಯ : ಮಿಲ್ಕ್ ಮಾಸ್ಟರ್ ಸಂಸ್ಥೆಯಲ್ಲಿ ಆಯುಧ ಪೂಜೆ

0

ಮಿಲ್ಕ್ ಮಾಸ್ಟರ್ ಸಂಶೋಧಕ ರಾಷ್ಟ್ರ ಪ್ರಶಸ್ತಿ ವಿಜೇತ ದಿ. ರಾಘವ ಗೌಡರು ಹುಟ್ಟು ಹಾಕಿದ ಕ್ಷೀರ ಎಂಟರ್ ಪ್ರೈಸಸ್ ಮತ್ತು ಕ್ಷೀರ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಆಯುಧ ಪೂಜೆ ಮತ್ತು ವಾಹನ ಪೂಜೆ ನಡೆಯಿತು.

ಕುಟುಂಬಸ್ಥರು ಮತ್ತು ಕಾರ್ಮಿಕರು ವಾಹನ ಪೂಜೆಯಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಶ್ರೀಮತಿ ಮೈನಾ ಕುಸುಮಾದರ ಕೆಪಳಕಜೆ ( ಕರಿಕ್ಕಳ) , ಶ್ರೀಮತಿ ಮಧು ಯತೀಶ್ ಪಾಲೋಲಿ, ಸಿಬ್ಬಂದಿ ವರ್ಗ, ಕುಟುಂಬಸ್ಥರು ಸ್ಥಳೀಯರು, ಊರಿನವರು, ಉಪಸ್ಥಿತರಿದ್ದರು.

ವರದಿ : ಸಂಕಪ್ಪ ಸಾಲಿಯಾನ್