ಉಬರಡ್ಕ ಮಿತ್ತೂರು : ವೀರಭದ್ರ ದೇವಸ್ಥಾನ ಹಾಗೂ ಭಂಡಾರ ಮನೆ ನಿರ್ಮಾಣ ಕಾರ್ಯಕ್ಕೆ ಧನಸಹಾಯ

0

ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕ ಎಂಬಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ವೀರಭದ್ರ ದೇವಸ್ಥಾನ ಹಾಗೂ ಭಂಡಾರ ಮನೆ ನಿರ್ಮಾಣ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಜೀರ್ಣೋತ್ಥಾನ ಟ್ರಸ್ಟ್ ವತಿಯಿಂದ 2 ಲಕ್ಷ ರೂ. ಧನಸಹಾಯ ನೀಡಲಾಯಿತು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗ್ರಾ. ಯೋ. ಬಿ.ಸಿ. ಟ್ರಸ್ಟ್ ನ ಯೋಜನಾಧಿಕಾರಿ ಶ್ರೀ ಮಾಧವ ಗೌಡ, ತಾಲೂಕು ಜನಜಾಗೃತಿ ಸದಸ್ಯರಾದ ವಿಜಯಕುಮಾರ್, ಉಬರಡ್ಕ ಮಿತ್ತೂರು ಗ್ರಾಮ ಒಕ್ಕೂಟ ಅಧ್ಯಕ್ಷರಾದ ಜನಾರ್ಧನ, ಅಮೈ ಮಡಿಯಾರ್ ಒಕ್ಕೂಟ ಅಧ್ಯಕ್ಷರಾದ ಭಾಗೀರಥಿ ಸೂಂತೋಡು, ಉಬರಡ್ಕ ಒಕ್ಕೂಟದ ಪದಾಧಿಕಾರಿಗಳಾದ ಸುಬ್ಬಪ್ಪ ಬಾರಿಕೆ, ಅನಂತ ಕುಮಾರ್ ಸೂರ್ಯಮನೆ, ಜಯಂತಿ ಸೂರ್ಯಮನೆ, ನಾರಾಯಣ ನೀರಬಿದಿರೆ, ಪದ್ಮಾವತಿ ಸೂರ್ಯಮನೆ, ವಲಯ ಮೇಲ್ವಿಚಾರಕರಾದ ಶ್ರೀಮತಿ ಜಯಶ್ರೀ ಗ್ರಾಮ ಸೇವಾ ಪ್ರತಿನಿಧಿಯಾದ ಅರ್ಪಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.