ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿ ಸಭೆ

0

ಸಂಜೆಯ ಸಂಗೀತ ರಸಮಂಜರಿ ಹಾಗೂ ನಾಳೆಯ ಶೋಭಾಯಾತ್ರೆಯ ಪೂರ್ವತಯಾರಿ ಕುರಿತು ಚರ್ಚೆ

ಶ್ರೀ ಶಾರದಾಂಬ ದಸರಾ ಸಮೂಹ ಸಮಿತಿಯ ಸಭೆಯು ಶ್ರೀ ಚೆನ್ನಕೇಶವ ದೇವಾಲಯದ ಮುಂಭಾಗದ ಶಾರದಾಂಬ ಕಲಾವೇದಿಕೆಯಲ್ಲಿ ಅ.16ರಂದು ನಡೆಯಿತು.

ಸಭೆಯಲ್ಲಿ ಇಂದು ಸಂಜೆ ನಡೆಯಲಿರುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಹಾಗೂ ನಾಳೆ ನಡೆಯಲಿರುವ ಶ್ರೀದೇವಿಯ ಶೋಭಾಯಾತ್ರೆಯ ಕುರಿತಂತೆ ಸಮೂಹ ಸಮಿತಿಯ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು.

ಇಂದು ಸಂಜೆ ನಡೆಯುವ ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಸುಮಾರು ಐದು ಸಾವಿರ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಜೊತೆಗೆ ಐನೂರು ಜನ ಸ್ವಯಂ ಸೇವಕರುಗಳು ಭಾಗವಹಿಸುವಂತೆ ಚರ್ಚಿಸಲಾಯಿತು.

ಶೋಭಾಯಾತ್ರೆಯು ನಾಳೆ ಅಪರಾಹ್ನ ಮೂರು ಗಂಟೆಯಿಂದ ನಡೆಯಲಿದ್ದು ಶ್ರೀದೇವಿಯ ಶೋಭಾಯಾತ್ರೆಯು ಹಾದು ಹೋಗುವ ಸ್ಥಳಗಳಲ್ಲಿ ನಡೆಯಲಿರುವ ಸಂಗೀತ ರಸಮಂಜರಿ, ಶೋಭಾಯಾತ್ರೆಯಲ್ಲಿ ಸಾಗಲಿರುವ ಡಿ.ಜೆ. ಸೇರಿದಂತೆ ಹದಿನೈದಕ್ಕೂ ಅಧಿಕ ಸ್ಥಬ್ದಚಿತ್ರಗಳ ಭಾಗವಹಿಸುವಿಕೆಯ ಕುರಿತಂತೆ ಚರ್ಚಿಸಲಾಯಿತು. ಇದರೊಂದಿಗೆ ಎಲ್ಲಾ ಇಲಾಖೆಯವರ ಸಂಪೂರ್ಣ ಸಹಕಾರ , ವರ್ತಕರುಗಳ ಸಹಕಾರ, ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲದೆ, ಎಲ್ಲರೂ ಶೋಭಾಯಾತ್ರೆಯ ಜೊತೆಗೆ ಹೆಜ್ಜೆ ಹಾಕುವಂತೆ ಸಮಿತಿಯ ವತಿಯಿಂದ ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಪದಾಧಿಕಾರಿಗಳ, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿಯ ಪದಾಧಿಕಾರಿಗಳು, ಸುಳ್ಯ ತಾಲೂಕು ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು, ಶ್ರೀ ಶಾರದಾಂಬ ಉತ್ಸವ ಸಮಿತಿ ಪದಾಧಿಕಾರಿಗಳು, ಮಹಿಳಾ ಸಮಿತಿಯ ಪದಾಧಿಕಾರಿಗಳು, ವಿವಿಧ ಟ್ಯಾಬ್ಲೋದ ಮಾಲಕರುಗಳು, ಡಿ.ಜೆ. ಪದಾಧಿಕಾರಿಗಳು ಉಪಸ್ಥಿತರಿದ್ದರು