ಅ.28ರಂದು ಸರಕಾರಿ‌‌ ನೌಕರರ ಸಂಘದ ಚುನಾವಣೆ

0

ಒಬ್ಬರಿಂದ ನಾಮಪತ್ರ ವಾಪಸ್ – 5 ಮಂದಿ ಶಿಕ್ಷಕರು ಕಣದಲ್ಲಿ : ಬಿ.ಇ.ಒ. ಕಚೇರಿ ನಿರ್ದೇಶಕ ಸ್ಥಾನಕ್ಕೂ ಚುನಾವಣೆ

ಸುಳ್ಯ ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕ ಸ್ಥಾನಕ್ಕೆ 28 ಮಂದಿ ಅವಿರೋಧ ಆಯ್ಕೆಯಾಗಿದ್ದು, ಶಿಕ್ಷಕರ ಕ್ಷೇತ್ರ ಹಾಗೂ ಬಿ.ಇ. ಒ ಕಚೇರಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಶಿಕ್ಷಕ ಕ್ಷೇತ್ರದ 4 ನಿರ್ದೇಶಕ ಸ್ಥಾನಕ್ಕೆ 6 ಮಂದಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸು ಪಡೆಯುವ ದಿನವಾದ ಅ.21ರಂದು ಅಡ್ಪಂಗಾಯ ಶಾಲೆಯ ಮುಖ್ಯ ಶಿಕ್ಷಕಿ ಧನಲಕ್ಷ್ಮೀ ಕುದ್ಪಾಜೆ ನಾಮಪತ್ರ ವಾಪಸ್ ಪಡೆದಿರುವುದರಿಂದ 5 ಮಂದಿ ಕಣದಲ್ಲಿದ್ದಾರೆ. ಶಿಕ್ಷಕರಾದ ಕುಶಾಲಪ್ಪ ತುಂಬತ್ತಾಜೆ, ಕುಶಾಲಪ್ಪ ಪಾರೆಪ್ಪಾಡಿ, ಗೋಪಾಲಕೃಷ್ಣ ಬನ, ಜಲಜಾಕ್ಷಿ‌ ಹಾಗೂ ಚಂದ್ರಶೇಖರ ಪಿ ಕಣದಲ್ಲಿದ್ದಾರೆ. 197 ಮಂದಿ ಮತದಾರರಿದ್ದು ಅತೀ ಹೆಚ್ಚು ಮತ ಪಡೆದ 4 ಮಂದಿ ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.

ಬಿ.ಇ.ಒ. ಕಚೇರಿಯ 1 ನಿರ್ದೇಶಕ ಸ್ಥಾನಕ್ಕೆ ಕಚೇರಿ ಸಿಬ್ಬಂದಿಗಳಾದ ಶಿವಪ್ರಸಾದ್ ಕೆ.ವಿ. ಹಾಗೂ ಪೃಥ್ವಿ ಕುಮಾರ್ ನಾಮಪತ್ರ ಸಲ್ಲಿಸಿದ್ದು, ಒಟ್ಟು 22 ಮಂದಿ ಮತದಾರರಿದ್ದಾರೆ. ಅತೀ ಹೆಚ್ಚು ಮತ ಪಡೆದವರು ನಿರ್ದೇಶಕರಾಗಿ ಆಯ್ಕೆಯಾಗುತ್ತಾರೆ.

ಅ.28ರಂದು ಬೆಳಗ್ಗೆ ಯಿಂದ ಸಂಜೆ 4 ಗಂಟೆ ವರೆಗೆ ಸುಳ್ಯದ ಎಪಿಎಂಸಿಯಲ್ಲಿ ಮತದಾನ ನಡೆದು, ಅಂದೇ ಸಂಜೆ ಫಲಿತಾಂಶ ಘೋಷಣೆ ಯಾಗುವುದು.