ಇಂದು ಶ್ರೀ ರಂಗಪೂಜೆ, ದರ್ಶನಬಲಿ, ಬಟ್ಟಲು ಕಾಣಿಕೆ

ಸುಬ್ರಹ್ಮಣ್ಯ ಕುಲ್ಕುಂದದ
ಬಸವೇಶ್ವರ ದೇವಸ್ಥಾನ
ವಾರ್ಷಿಕ ಜಾತ್ರೋತ್ಸವ ಏ.19 ರಿಂದ ನಡೆಯುತ್ತಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದೆ. ಇಂದು ರಾತ್ರಿ ನಡೆಯಲಿದೆ.









ಏ.19 ರ ಬೆಳಗ್ಗೆ ಹಸಿರು ಕಾಣಿಕೆ
ಸಮರ್ಪಣೆ ನಡೆದು,
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ, ಪ್ರಸಾದ ಶುದ್ದಿ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆಯಿತು ರಾತ್ರಿ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ ಯಕ್ಷಗಾನ ಬಯಲಾಟ “ದಕ್ಷಯಜ್ಞ – ಗಿರಿಜಾ ಕಲ್ಯಾಣ” ನಡೆಯಿತು.
ಏ. 20 ರ ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ಶ್ರೀ ದೇವರಿಗೆ ಬೆಳಗ್ಗಿನ ಮಹಾಪೂಜೆ ಬಳಿಕ ಶತರುದ್ರಾಭಿಷೇಕ ನಡೆದು ಪರಿವಾರ ದೇವರುಗಳಿಗೆ ಕಲಶಾಭಿಷೇಕ, ತಂಬಿಲ ಸೇವೆ ನಡೆಸಿ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ, ರಾತ್ರಿ ತಾಯಂಬಕ, ಶ್ರೀ ರಂಗಪೂಜೆ, ಶ್ರೀ ಭೂತ ಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆಪೂಜೆ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆದು, ಮಂತ್ರಾಕ್ಷತೆ , ಅನ್ನ ಸಂತರ್ಪಣೆ ನಡೆಯಲಿದೆ.










