ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ದಕ್ಷಾಧಾರಿತ ಮೌಲ್ಯಮಾಪನ ಕಾರ್ಯಗಾರ

0

ಸಿಬಿಎಸ್ಇ ಸಿ.ಓ.ಇ ಬೆಂಗಳೂರು ಹಾಗೂ ಕೆವಿಜಿ ಐಪಿಎಸ್ ಇದರ ಜಂಟಿ ಆಶ್ರಯದಲ್ಲಿ ಶಿಕ್ಷಕರುಗಳಿಗಾಗಿ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ಮತ್ತು ವಿದ್ಯಾರ್ಥಿಗಳ ನೈಜ ಕಲಿಕೆ ಹಾಗೂ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಸಾಮರ್ಥ್ಯ ಆಧಾರಿತ ಮೌಲ್ಯಮಾಪನ “( competency based assessment ) ಕಾರ್ಯಗಾರವನ್ನು ಅ. 24 ಮತ್ತು 25 ರಂದು ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಯಿತು. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಸಿಬಿಎಸ್ಇ ಮಾನ್ಯತೆ ಪಡೆದ ತರಬೇತುದಾರರಾದ ಬ್ರಹ್ಮಾವರದ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಶ್ರೀ ಜಾರ್ಜ್ ಕುರಿಯನ್ ಹಾಗೂ ವಿದ್ಯಾ ದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್ಲಿನ ಶಿಕ್ಷಕಿ ಶ್ರೀಮತಿ ಅಶ್ವಿನಿ ಐತಾಳ್ ಇವರುಗಳು ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಪ್ರಾರ್ಥನೆ ಮತ್ತು ದೀಪ ಪ್ರಜ್ವಲನದೊಂದಿಗೆ ಆರಂಭಿಸಲಾಯಿತು. ಕಾರ್ಯಗಾರದಲ್ಲಿ ಶಿಕ್ಷಕರಿಗೆ ವಿದ್ಯಾರ್ಥಿಗಳ ದಕ್ಷತಾಧಾರಿತ ಮೌಲ್ಯಮಾಪನದ ಮೂಲಭೂತ ತತ್ವಗಳು, ಕಲಿಕೆಯ ಫಲಿತಾಂಶಗಳನ್ನು ಅಳೆಯುವ ನೂತನ ವಿಧಾನಗಳು ಮತ್ತು ಪರಿಣಾಮಕಾರಿ ಮೌಲ್ಯಮಾಪನ ಕುರಿತು ಮಾರ್ಗದರ್ಶನವನ್ನು ನೀಡಿದರು. ಜೊತೆಗೆ ವಿವಿಧ ಮಾದರಿಯ ಪ್ರಶ್ನೆಗಳನ್ನು ವಿನ್ಯಾಸಗೊಳಿಸುವ ಕುರಿತು ಗುಂಪು ಚಟುವಟಿಕೆಗಳು ಸಂವಾದ ಮತ್ತು ಉದಾಹರಣೆಗಳ ಮೂಲಕ ಹೊಸ ಕಲಿಕೆಯ ವಿಧಾನಗಳನ್ನು ಅಳವಡಿಸಿಕೊಳ್ಳುವ ಪ್ರಾಯೋಗಿಕ ಕಾರ್ಯಕ್ರಮಗಳನ್ನು ನಡೆಸಿದರು.


ಈ ಕಾರ್ಯಗಾರದಲ್ಲಿ ಒಟ್ಟು ಆರು ಸಿ ಬಿಎಸ್ಇ ಶಾಲೆಗಳ 57 ಶಿಕ್ಷಕರುಗಳು ಭಾಗವಹಿಸಿದ್ದರು. ಕಾರ್ಯಗಾರವು ಶಿಕ್ಷಕರಲ್ಲಿ ಹೊಸ ಶೈಕ್ಷಣಿಕ ದೃಷ್ಟಿಕೋನವನ್ನು ಮೂಡಿಸಿದೆ ಎಂದು ಭಾಗವಹಿಸಿದ ಶಿಕ್ಷಕರುಗಳು ತಮ್ಮ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸಮಾರೋಪದಲ್ಲಿ ಕೆವಿಜಿ ಅಕಾಡೆಮಿ ಎಜುಕೇಶನ್ ಇದರ ಕಮಿಟಿ ಬಿ ವಿಭಾಗದ ನಿರ್ದೇಶಕಿ ಡಾ. ಜ್ಯೋತಿ ಆರ್ ಪ್ರಸಾದ್ ಭಾಗವಹಿಸಿ ಕಲಿಕೆ ಎನ್ನುವುದು ನಿರಂತರವಾದದು. ಅದು ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ ಹಾಗೂ ಇಂತಹ ಕಾರ್ಯಕಾರಿಗಳ ಸದುಪಯೋಗವನ್ನು ನಾವೆಲ್ಲರೂ ಪಡೆಯಬೇಕು ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ” ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಇಂತಹ ಕಾರ್ಯಗಾರಗಳು ಅತಿ ಅವಶ್ಯಕ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಈ ಎಲ್ಲಾ ಅಂಶಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಶಿಕ್ಷಕಿಯಾದ ಶ್ರೀಮತಿ ಭವ್ಯ. ಕೆ ಸ್ವಾಗತಿಸಿ ಶ್ರೀಮತಿ ಸೌಮ್ಯ ಕೆ.ಡಿ. ವಂದಿಸಿದರು.