








ಭದ್ರ -ಟೆಕ್ ವಿಂಡೋಸ್ & ಡೋರ್ರ್ಸ್ ನಿಂತಿಕಲ್ಲು ಇದರ ಸಹಸಂಸ್ಥೆಯಾಗಿ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ದ ಉತ್ಕರ್ಷ ಸೌಧದಲ್ಲಿ ಡಿ.12 ರಂದು ಶುಭಾರಂಭ ಗೊಂಡಿತು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಶುಭ ಹಾರೈಸಿದರು. ಸಂಸ್ಥೆಯ ಮಾಲಕರಾದ ದಯಾನಂದ ಮೇಲ್ಮನೆ,ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಸದಸ್ಯರಾದ ಚಂದ್ರಶೇಖರ ದೇರಾಜೆ, ಲಿಖಿತ್ ಪಲ್ಲೋಡಿ, ಕಿರಣ್ ಕಂರ್ಬು ನೆಕ್ಕಿಲ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಲೋಕೇಶ್ ಬರೆಮೇಲು,ನ್ಯಾಯವಾದಿ ಶಂಕರ್ ಭಟ್, ಕರ್ನಾಟಕ ಯುವಕ ಮಂಡಲದ ಕಾರ್ಯಧರ್ಶಿ ಅಶೋಕ್ ಕೋಡಿ, ಹರೀಶ್ ಕರಿಮಜಲು, ದಾಸಪ್ಪ ಗೌಡ ಮೇಲ್ಮನೆ, ಶ್ರೀಮತಿ ಭುವನೇಶ್ವರಿ ದಯಾನಂದ ಮೇಲ್ಮನೆ , ವಿದ್ಯಾನಂದ ಮೇಲ್ಮನೆ, ನಿತ್ಯಾನಂದ ಮೇಲ್ಮನೆ , ಸಂಸ್ಥೆಯ ಸಿಬ್ಬಂದಿಗಳು, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದಯಾನಂದ ಮೇಲ್ಮನೆ ಪ್ರಾಸ್ತಾವಿಕವಾಗಿ ಮಾತನಾಡಿ “ವಿನೂತನ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟ ಮತ್ತು ಸುದೀರ್ಘ ಬಾಳಿಕೆಗೆ ಹೆಸರು ವಾಸಿಯಾದ ಏಕೈಕ ತಯಾರಿಕಾ ಘಟಕ ನಮ್ಮದು. ನಮ್ಮ ಮಾತೃ ಸಂಸ್ಥೆ ನಿಂತಿಕಲ್ಲಿನಲ್ಲಿದೆ “. ಎಂದು ವಿವರಿಸಿದರು.
ನಿತ್ಯಾನಂದ ಮೇಲ್ಮನೆ ಸ್ವಾಗತಿಸಿದರು.ದಯಾನಂದ ಮೇಲ್ಮನೆ ವಂದಿಸಿದರು.










