ನಾಲ್ಕೂರು ಗ್ರಾಮದ ಗ್ರಾಮ ದೇವವಾದ ಚಿಲ್ತಡ್ಕ ಶ್ರೀ ಉಳ್ಳಾಕುಲು ಕುಮಾರ ದೈವಗಳ ದೈವಸ್ಥಾನದಲ್ಲಿ ನಿರ್ಮಿಸಿದ ಆವರಣ ಗೋಡೆಯು ನೆನ್ನೆ ಸುರಿದ ಭಾರೀ ಮಳೆಗೆ ಹೊಳೆ ತುಂಬಿ ಹರಿದಾಗ ಕುಸಿದು ಬಿದ್ದಿದೆ.
ಸ್ಥಳಕ್ಕೆ ಗ್ರಾಮ ಪಂಚಾಯತ್ ಗುತ್ತಿಗಾರು ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು, ನಾಲ್ಕೂರು ಗ್ರಾಮ ಲೆಕ್ಕಾಧಿಕಾರಿ,. ಸ್ಥಳೀಯ ಪಂಚಾಯತ್ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಕ್ಕದಲ್ಲಿ ಇರುವ ಕೃಷಿಕರ ತೋಟಕ್ಕೂ ನೀರು ನುಗ್ಗಿದೆ. ಅಲ್ಲದೆ ಸಂಪರ್ಕ ಸೇತುವೆಗೂ ಹಾನಿಯಾಗಿದೆ. (ವರದಿ.ಡಿ.ಹೆಚ್.)