p>

ಸುಳ್ಯದಲ್ಲಿ ಜನತಾ ದಳ (ಜಾ) ಕಾರ್ಯಾಲಯ ಉದ್ಘಾಟನೆ

0

ಸುಳ್ಯ ರಥಬೀದಿಯಲ್ಲಿರುವ ಕಟ್ಟೆಕಾರ್ ಕಾಂಪ್ಲೆಕ್ಸ್ ನಲ್ಲಿ ಜನತಾ ದಳದ (ಜಾ) ಕಾರ್ಯಾಲಯ ಉದ್ಘಾಟನೆ ನ.28 ರಂದು ನಡೆಯಿತು.

ಜೆಡಿಎಸ್ ಸುಳ್ಯ ತಾಲೂಕು ಅಧ್ಯಕ್ಷ ಸಯಕುಮಾರ್ ಕೋಡ್ತುಗುಳಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಜೆಡಿಎಸ್ ವಕ್ತಾರ ಎಂ.ಬಿ ಸದಾಶಿವ ಕಾರ್ಯಲಯ ಉದ್ಘಾಟಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ‌ ಮಾಧವ ಗೌಡ ದೀಪ ಬೆಳಗಿದರು. ರಾಜ್ಯ ಕಾರ್ಯದರ್ಶಿ ಇಕ್ಬಾಲ್ ಎಲಿಮಲೆ, ಪ್ರಮುಖರಾದ ದಾಮೋದರ ನಾರ್ಕೋಡು, ರೋಹನ್ ಪೀಟರ್, ಮೀರಾ ಸಾಹೇಬ್ ಕಡಬ, ಪ್ರವೀಣ್ ಮುಂಡೋಡಿ, ನಾರಾಯಣ ಅಗ್ರಹಾರ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್, ರಾಂ ಕುಮಾರ್ ಸುಬ್ರಹ್ಮಣ್ಯ, ಮಜೀದ್ ಸುಳ್ಯ, ತಿಲಕ್ ಸುಬ್ರಹ್ಮಣ್ಯ, ಅಗ್ರಹಾರ ದುಗ್ಗಪ್ಪ ನಾಯ್ಕ್ ಕುಲ್ಕುಂದ, ಉಮ್ಮರ್ ಕಲ್ಲುಗುಂಡಿ, ಪದ್ಮನಾಭ ಹರ್ಲಡ್ಕ, ದೇವರಾಂ ಬಾಳೆಕಜೆ, ಜನಾರ್ದನ ಗೌಡ ಉಳುವಾರು, ಸುದರ್ಶನ್ ಗೌಡ ಕೊಯಿಂಗೋಡಿ, ಸುರೇಶ್ ಕುಮಾರ್ ನಡ್ಕ, ಮೋನಪ್ಪ ನಾಯ್ಕ್ ಕೊಲ್ಲಮೊಗ್ರ, ರಫೀಕ್ ಐವತ್ತೊಕ್ಲು,
ಮೋಹನ್ ಕೊಲ್ಲಮೊಗ್ರ ಮೊದಲಾದವರಿದ್ದರು.

ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಕಾರ್ಯಕ್ರಮ ನಿರೂಪಿಸಿದರು.