p>

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ದಿಂದ ಗೌರವ

0

ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ಭಯೋತ್ಪಾದಕರಿಂದ ನಡೆಸಿದ ದುರಂತ ದಲ್ಲಿ ಮೃತಪಟ್ಟ 40 ಜನ ಯೋಧರಿಗೆ ನುಡಿ ನಮನ ಕಾರ್ಯಕ್ರಮವು ಶ್ರೀ ಚನ್ನಕೇಶವ ದೇವಸ್ಥಾನ ಎದುರು ಫೆ.14 ರಂದು ನಡೆಯಿತು.


ಭಜರಂಗದಳ ಜಿಲ್ಲಾ ಪ್ರಮುಖರಾದ ಲತೀಶ್ ಗುಂಡ್ಯ ಪ್ರಾಸ್ತಾವಿಕ ಮಾತನಾಡಿದರು. ದಿಕ್ಸೂಚಿ ಭಾಷಣವನ್ನು ಎ. ಟಿ. ಕುಸುಮಾಧರ ಕಾರ್ಯತೋಡಿ ಮಾಡಿದರು. ನಿವೃತ್ತ ಸೈನಿಕ ದಯಾನಂದ ಭಾಗಮಂಡಲ ದೇಶದ ಜಾಗೃತಿ ಬಗ್ಗೆ ಮಾತನಾಡಿದರು. ನಗರ ಕಾರ್ಯದರ್ಶಿ ದೇವಿಪ್ರಸಾದ್ ಧನ್ಯವಾದ ಮಾಡಿದರು.

ಪ್ರಖಂಡ ಸಹ ಸಂಯೋಜಕ್ ನವೀನ್ ಎಲಿಮಲೆ, ಗೋ ರಕ್ಷಕ್ ಪ್ರಮುಖ್ ಅರವಿಂದ್,ನಗರ ಸಂಯೋಜಕ ವರ್ಷಿತ್ ಚೊಕ್ಕಾಡಿ, ರೂಪೇಶ್, ಪ್ರಮೋದ್, ಅಭಿಷೇಕ್
ಬಜರಂಗದಳ ತಾಲ್ಲೂಕು ಮತ್ತು ನಗರ ಕಾರ್ಯಕರ್ತರು ಹಾಗೂ ದೇಶ ಪ್ರೇಮಿಗಳು ಉಪಸ್ಥಿತರಿದ್ದರು. ಭಾರತ ಮಾತೆಯ ಹಾಗೂ ಹುತಾತ್ಮರಾದ ವೀರ ಯೋಧರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.