ಐವರ್ನಾಡಿನಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ ಟ್ರೇಡಿಂಗ್ ಅಡಿಕೆ ಅಂಗಡಿ ಶುಭಾರಂಭ

0

ಐವರ್ನಾಡಿನ ಮಡ್ತಿಲ ಕಾಂಪ್ಲೆಕ್ಸ್ ನಲ್ಲಿ ಪ್ರಶಾಂತ್ ಪೈಯವರ ಮಾಲಕತ್ವದ ಶ್ರೀ ಲಕ್ಷ್ಮೀ ವೆಂಕಟೇಶ್ ಟ್ರೇಡಿಂಗ್ ಕಂ. ಫೆ.15 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.ಅರ್ಚಕ ಪದ್ಮನಾಭ ಭಟ್ ಪೂಜಾ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ಶ್ರೀಧರ ಪೈ,ಶ್ರೀಮತಿ ಸುನಿತಾ, ದಾಮೋದರ ಭಟ್, ಅರವಿಂದ ಪೈ, ವಂದನಾ ಪೈ, ಅನಿಶ್ ಪೈ, ರವಿಕುಮಾರ್, ಸುದರ್ಶನ ಶೆಣೈ, ಕಟ್ಟಡ ಮಾಲಕ ಸತೀಶ್ ಮಡ್ತಿಲ, ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಪ್ರಸಾದ್ ಸಿ.ಕೆ, ಆರ್.ಕೆ.ಬೆಳ್ಳಾರೆ,ರಮೇಶ್ ಮಿತ್ತಮೂಲೆ, ಕೃಷ್ಣಪ್ಪ ಗೌಡ ನೆಕ್ರೆಪ್ಪಾಡಿ,ಶಿವರಾಮ ಗೌಡ ನೆಕ್ರೆಪ್ಪಾಡಿ,ಕರುಣಾಕರ ಮಡ್ತಿಲ, ಶಿವಪ್ರಸಾದ್ ಕಟ್ಟತ್ತಾರು , ದಯಾನಂದ ಕಟ್ಟತ್ತಾರು,ದೇವಿಪ್ರಸಾದ್ ಎಸ್.ಎನ್. ರಂಜನ್ ಮೂಲೆತೋಟ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


ಇಲ್ಲಿಅಡಿಕೆ,ಕಾಳುಮೆಣಸು ಹಾಗೂ ಇನ್ನಿತರ ಕಾಡುತ್ಪತ್ತಿಗಳನ್ನು ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.