ಕಾವ್ಯ ದಶಾವತಾರ ಕವಿಗೋಷ್ಠಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚನ

0

ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಫೆ.23 ರಂದು ಮಂಗಳೂರಿನ ಉರ್ವ ಸ್ಟೋರ್ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕಾವ್ಯ ದಶಾವತಾರ ಕವಿಗೋಷ್ಠಿಯು ಇತರ ಕಾರ್ಯಕ್ರಮಗಳೊಂದಿಗೆ ನಡೆಯಿತು.ಕವಿಗೋಷ್ಠಿಯಲ್ಲಿ ಯುವ ಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಭಾಗವಹಿಸಿ ಕವನ ವಾಚಿಸಿದರು.ಇವರನ್ನು ಕನ್ನಡ ಚಿತ್ರರಂಗದ ಖ್ಯಾತ ಪೋಷಕ ಖಳನಾಯಕ ಹಾಸ್ಯನಟ ದೊಡ್ಡಣ್ಣ ಅವರು ಆಕರ್ಷಕ ಸನ್ಮಾನ ಪತ್ರ ಸ್ಮರಣಿಕೆಗಳನ್ನೊಳಗೊಂಡು ಶಾಲು ಹೊದಿಸಿ ಸನ್ಮಾನಿಸಿದರು.