ಪೆರುವಾಜೆ: ಸುರೇಶ ಗೌಡರಿಗೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುರಕ್ಷಾ ಮೊತ್ತ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಪೆರುವಾಜೆ ಕಾರ್ಯಕ್ಷೇತ್ರದ ಜ್ಯೋತಿ ಸಂಘದ ಸದಸ್ಯರಾದ ಸುರೇಶ ಗೌಡ ಎಂಬವರು ಡೆಂಗ್ಯೂ ಮತ್ತು ಟೈಪಾಯಿಡ್ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 7000 ಮೊತ್ತದ ಚೆಕ್ಕನ್ನು ಮಾ. 9ರಂದು ವಿತರಿಸಲಾಯಿತು. ಪೆರುವಾಜೆ ಗ್ರಾಮ ಪಂಚಾಯತ್ ಪಿ. ಡಿ. ಓ ಜಯಪ್ರಕಾಶ್ ಅಲೆಕ್ಕಾಡಿ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಪೆರುವಾಜೆ ಒಕ್ಕೂಟದ ಅಧ್ಯಕ್ಷರಾದ ಸುಂದರ ನಾಯ್ಕ್, ವಲಯ ಮೇಲ್ವಿಚಾರಕ ವಸಂತ್. ಎಲ್, ಸೇವಾಪ್ರತಿನಿಧಿ ಯಶೋಧ, ವಿ. ಎಲ್. ಇ ತೇಜಸ್ವಿನಿ, ಸುವಿದ ಸಹಾಯಕಿ ಶಂಭಾವಿ ಉಪಸ್ಥಿತರಿದ್ದರು.