p>

ಕೊಡಿಯಾಲ: ಬೈಕ್ ಅಪಘಾತಗೊಂಡು ಆಸ್ಪತ್ರೆಗೆ ದಾಖಲಾದ ಸುಜಿತ್ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪೂರ್ಣ ಸುರಕ್ಷಾ ಮಂಜೂರು

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಬೆಳ್ಳಾರೆ ವಲಯದ ಕೊಡಿಯಾಲ ಕಾರ್ಯಕ್ಷೇತ್ರದ ಶ್ರೀ ಮಂಜುನಾಥ ಸಂಘ ಕಲ್ಲಪ್ಪನೆ ಇದರ ಸದಸ್ಯರಾದ ಶೀನಪ್ಪ ಗೌಡ ಗುತ್ತಿನ ಮನೆ ಇವರ ಮಗ ಸುಜಿತ್ ರವರಿಗೆ ಬೈಕ್ ಅಪಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ಸಂಪೂರ್ಣ ಸುರಕ್ಷಾದಿಂದ ಮಂಜೂರಾದ 80000ಮೊತ್ತದ ಚೆಕ್ಕನ್ನು ಮಾ. 9ರಂದು ವಿತರಿಸಲಾಯಿತು. ಒಕ್ಕೂಟದ ಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ಪ್ರಭು, ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಕೊಡಿಯಾಲ ಬಿ ಒಕ್ಕೂಟದ ಅಧ್ಯಕ್ಷರಾದ ಗೋವರ್ಧನ, ತಾಲೂಕಿನ ಆಂತರಿಕ ಲೆಕ್ಕಪರಿಶೋಧಕರಾದ ಉಮೇಶ್ ವಲಯ ಮೇಲ್ವಿಚಾರಕ ವಸಂತ್. ಎಲ್, ನಗದು ಸಹಾಯಕಿ ಗಾಯತ್ರಿ, ವಿ.ಎಲ್.ಇ ಕೀರ್ತಿ, ಸೇವಾ ಪ್ರತಿನಿಧಿ ರಾಧಾಕೃಷ್ಣ, ಒಕ್ಕೂಟದ ಪದಾಧಿಕಾರಿ ಸರಿತಾ, ಮಧುಶ್ರೀ, ವೇದಾವತಿ ಸದಸ್ಯರಾದ ನಿತಿನ್, ಅಜಯ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.