ಸುಳ್ಯ ಅನ್ಸಾರ್ ಸುವರ್ಣ ಭವನಕ್ಕೆ ಶಂಕುಸ್ಥಾಪನೆ

0

ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಇದರ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಅನ್ಸಾರ್ ಕಾಂಪ್ಲೆಕ್ಸ್ ಪಕ್ಕದಲ್ಲಿ ನಿರ್ಮಿಸಲು ಉದ್ದೇಶಿತ ಅನ್ಸಾರ್ ಸುವರ್ಣ ಭವನ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಮಾ.10 ರಂದು ನಡೆಯಿತು.

ಸಯ್ಯದ್ ಕುಂಞಿಕೋಯ ತಂಙಳ್ ಶಂಕುಸ್ಥಾಪನೆ ನೇರವೆರಿಸಿದರು.
ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ದುವಾಶಿರ್ವಚನ ಮಾಡಿದರು.


ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಕೆ ಎಂ ಮುಸ್ತಫಾ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಶುಕೂರ್,ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಮಹಮ್ಮದ್,ಪ್ರಧಾನ ಕಾರ್ಯದರ್ಶಿ ಕೆ ಬಿ ಮಜೀದ್,ಮಾಜಿ ಅಧ್ಯಕ್ಷರಾದ ಕೆ ಬಿ ಮಹಮ್ಮದ್ ಹಾಜಿ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ಸಂಶುದ್ದೀನ್ ಅನ್ಸಾರ್ ಎಸ್ ಪಿ ಅಬೂಭಕ್ಕರ್,ಲತೀಫ್ ,ಹಾಜಿ ಹಮೀದ್ ಜನತಾ, ಜುನೈದ್ ಎನ್ ಎ,ಕೆ ಬಿ ಇಬ್ರಾಹಿಂ,ಹಮೀದ್ ಅಬ್ದುಲ್ ಖಾದರ್ ಹಾಜಿ ಪಾರೆ, ಪೂಟ್ವೇರ್,ಶಾಫಿ ಕುತ್ತಮೊಟ್ಟೆ,ಬಶೀರ್ ಸಪ್ನಾ,ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ,ರಿಯಾಜ್ ಕಟ್ಟೆಕ್ಕಾರ್,ಗಾಂಧಿನಗರ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬೂಭಕ್ಕರ್ ಜಟ್ಟಿಪಳ್ಳ, ಅಜೀಜ್ ಪೂಟ್ವೇರ್ ಮೊದಲಾದವರು ಉಪಸ್ಥಿತರಿದ್ದರು.
ಅನ್ದಾರ್ ಪ್ರಧಾನ ಕಾರ್ಯದರ್ಶಿ ಹನೀಪ್ ಬಿ ಎಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.