ಭಾರತ್ ರಾಮಚಂದ್ರ ಆಗ್ರೋರವರಿಗೆ ವರ್ತಕರ ಸಂಘದಿಂದ ಗೌರವಾರ್ಪಣೆ

0

ಸುಳ್ಯ ವರ್ತಕರ ಸಂಘದ ಹಿರಿಯರು ಸಂಘದ ಪದಾಧಿಕಾರಿಯು ಉದ್ಯಮಿಗಳಾದ ರಾಮಚಂದ್ರ ಅಗ್ರೋ ಅವರ ಎಪ್ಪತ್ತಾರನೇ ಹುಟ್ಟು ಹಬ್ಬ ಹಾಗೂ ಉದ್ಯಮ ರಂಗದಲ್ಲಿ ಸುವರ್ಣ ಮಹೋತ್ಸವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಸುಳ್ಯ ವರ್ತಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿಸುವ ಕಾರ್ಯಕ್ರಮ ನಡೆಯಿತು.


ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಯವರ ನೇತೃತ್ವದಲ್ಲಿ ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಸುಳ್ಯ ವರ್ತಕರ ಭವನದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷರುಗಳಾದ ಪ್ರಭಾಕರ ನಾಯರ್,ಸಿಎ ಗಣೇಶ್ ಭಟ್ ಪಿ,ಪ್ರಧಾನ ಕಾರ್ಯದರ್ಶಿ ಡಿ.ಎಸ್ ಗಿರೀಶ್,ಕೋಶಾಧಿಕಾರಿ ಹೇಮಂತ್ ಕಾಮತ್,ಕಾರ್ಯದರ್ಶಿ ಲತಾ ಕುದ್ಪಾಜೆ, ನಿರ್ದೇಶಕರುಗಳಾದ ಎಂ ಸುಂದರ ರಾವ್,ಧರ್ಮಪಾಲ ಕೆ ಎಸ್,ಶ್ಯಾಮ್ ಪ್ರಸಾದ್ ಎ ಡಿ,ಜಗನ್ನಾಥ ರೈ ಪಿ,ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್,ಯು ಪಿ ಬಶೀರ್ ಮೊದಲಾದವರು ಉಪಸ್ಥಿತರಿದ್ದರು
.