ಡಾ.ಉಮ್ಮರ್ ಬೀಜದಕಟ್ಟೆಯವರಿಗೆ ಮರ್ಕಜ್ ನಾಲೇಜ್ ಸಿಟಿ ಯಲ್ಲಿ ಗೌರವಾರ್ಪಣೆ

0

ಸುಳ್ಯ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರು ,ಬೆಂಗಳೂರು ಪಾರ್ಮೇಡ್ ಕಂಪೆನಿಯ ಮಾನವ ಸಂಪನ್ಮೂಲ ಹಿರಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಇತ್ತೀಚೆಗೆ ಮರ್ಕಜ್ ನಾಲೇಜ್ ಸಿಟಿ ಗೇ ಭೇಟಿ ನೀಡಿ ನಾಲೇಜ್ ಸಿಟಿ ಆಡಳಿತ ನಿರ್ದೇಶಕ ಡಾ.ಹಕೀಮ್ ಅಝ್ಹರಿ ಯವರ ಜೊತೆ ಮಾನವ ಸಂಪನ್ಮೂಲ ವಿಭಾಗದ ಕುರಿತು ಸಭೆ ನಡೆಸಿದರು.

ಇದೇ ಸಂದರ್ಭದಲ್ಲಿ ಮರ್ಕಜ್ ನಾಲೇಜ್ ಸಿಟಿ ವತಿಯಿಂದ ಡಾ.ಬೀಜದಕಟ್ಟೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಮರ್ಕಜ್ ಶಿಲ್ಪಿ ಎ ಪಿ ಅಬೂಭಕ್ಕರ್ ಮುಸ್ಲಿಯಾರ್ ರವರನ್ನು ಭೇಟಿ ಮಾಡಿ ನಾಲೇಜ್ ಸಿಟಿ ಗೆ ಡಾ ಬೀಜದಕಟ್ಟೆಯವರ ಪ್ರತಿಷ್ಠಾನ ವತಿಯಿಂದ ‌1ಲಕ್ಷ‌ ರೂಪಾಯಿ ದೇಣಿಗೆ ನೀಡಿದರು.

ಮರ್ಕಜ್ ನಾಲೇಜ್ ಸಿಟಿಯಲ್ಲಿ ಆರಂಭಗೊಂಡಿರುವ ಅರೋಗ್ಯ ವಿಭಾಗಳಿಗೆ ತಮ್ಮ ಸಹಕಾರ ನೀಡುವ ಭರವಸೆಯನ್ನು ನೀಡಿದರು.
ಸುಳ್ಯ ಪ್ರೆಸ್ ಕ್ಲಬ್ ನಿರ್ದೇಶಕ ಶರೀಫ್ ಜಟ್ಟಿಪಳ್ಳ, ಮರ್ಕಜ್ ನಾಲೇಜ್ ಸಿಟಿ ವ್ಯವಹಾರ ವಿಭಾಗ ನಿರ್ದೇಶಕ ರವೂಪ್,ಸಜ್ಜನ ಪ್ರತಿಷ್ಠಾನ ನಿರ್ದೇಶಕ ಅಯ್ಯೂಬ್ ಗೂನಡ್ಕ, ಮರ್ಕಜ್ ನಾಲೇಜ್ ಸಿಟಿ ಕರ್ನಾಟಕ ಪ್ರತಿನಿಧಿ ಕಲಂದರ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.