p>

ಬೆಂಗಳೂರಿನಲ್ಲಿ ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ತಂಡದಿಂದ ಕಂಗಿಲು ಕುಣಿತ

0

ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ತಂಡ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲ ಸಂಸ್ಕೃತಿ ನಶಿಸುತ್ತಿರುವ ತಳ ಸಮುದಾಯ ತರಬೇತಿ ಶಿಬಿರ ಆಯ್ದ
ಕಲಾ ಪ್ರಕಾರಗಳ ರಾಜ್ಯಮಟ್ಟ ಕಲಾ ಪ್ರದರ್ಶನ ಹಾಗೂ ಸಮಾರೋಪ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಮಾ.10 ರಂದು ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದಲ್ಲಿ ಕಂಗಿಲು ಕುಣಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಆಯ್ಕೆಯಾದ ಪಂಜ ಶ್ರೀ ಶಾರದಂಬ ಭಜನಾ ಮಂಡಳಿಯ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರದರ್ಶನ ನೀಡಿದರು. ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ ಮೊದಲಾದವರು ಉಪಸ್ಥಿತರಿದ್ದರು.

ಕಂಗಿಲು ಕುಣಿತ
ತಂಡದಲ್ಲಿ ರವಿ ಚಳ್ಳಕೋಡಿ, ಪದ್ಮಯ ನಾಯ್ಕ್, ಅನಿಲ್ ಸಂಪ ,ದಿನೇಶ್ ಪುತ್ಯ ,ಹರ್ಷಿತ್ ಸಂಪ ,ಕಾರ್ತಿಕ್ ಪುತ್ಯ ,ಜಿನ್ನಪ್ಪ ಗುಂಡಡ್ಕ, ಸೀತಾರಾಮ ಸಂಪ, ಭರತ್ ಉಜಿರುಗುಂಡಿ, ನವೀನ್ ಸಂಪ ,ಪುರುಷೋತ್ತಮ ಆಚಾರ್ಯ ನಾಗತೀರ್ಥ, ಶಶಿ ದಾಸ್ ನಾಗತೀರ್ಥ, ಜತ್ತಪ್ಪ ,ಅರುಣ್ ಕುಮಾರ್ ಬಸ್ತಿಕಾಡು
ಪಾಲ್ಗೊಂಡಿದ್ದರು.