ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ಸಮ್ಮರ್ ಕ್ಯಾಂಪ್ ಉದ್ಘಾಟನೆ

0

ಏ. 1ರಿಂದ ಏ. 10ರ ತನಕ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯಲಿರುವ ಸಮ್ಮರ್ ಕ್ಯಾಂಪ್‌ನ ಉದ್ಘಾಟನೆ ಏ. 1ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಡ್ರಾಮ ಜೂನಿಯರ್ ಖ್ಯಾತಿಯ ತುಷಾರ್ ಗೌಡ, ನವೀನ್ ನೀನಾಸಮ್, ಶಾಲಾ ಸಂಚಾಲಕರಾದ ಎಂ.ಪಿ ಉಮೇಶ್, ಪ್ರಾಂಶುಪಾಲರಾದ ದೇಚಮ್ಮ ಟಿ‌. ಮಾದಪ್ಪ ಉಪಸ್ಥಿತರಿದ್ದರು.

ಶಿಬಿರದಲ್ಲಿ ನೀನಾಸಂ ತರಬೇತುದಾರರಿಂದ ತರಬೇತಿ, ಕಲೆ, ಕ್ರಾಫ್ಟ್, ಡ್ಯಾನ್ಸ್, ಮ್ಯೂಸಿಕ್, ಮಿಮಿಕ್ರಿ, ಮ್ಯಾಜಿಕ್, ಸ್ನೇಕ್ ಶೋ ಸೇರಿದಂತೆ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗೆ ಪೂರಕವಾದ ವಿವಿಧ ಗೇಮ್ಸ್ ನಡೆಯಲಿದೆ. ಶಿಬಿರದಲ್ಲಿ 1ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಏ. 10ರಂದು ವಿದ್ಯಾರ್ಥಿಗಳ ಸ್ಟೇಜ್ ಪರ್ಫಾರ್ಮೆನ್ಸ್ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕರಾದ ಎಂ.ಪಿ. ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.