ಸುಳ್ಯದಲ್ಲಿ ಜೆಡಿಎಸ್ ರೋಡ್ ಶೋ ಮೂಲಕ ಮತಯಾಚನೆ

0

ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿ : ಅಭ್ಯರ್ಥಿ ಹೆಚ್.ಎಲ್.ವೆಂಕಟೇಶ್ ಮನವಿ

ರಾಜ್ಯದಲ್ಲಿ ಜನರು ಬೆಲೆಏರಿಕೆಯಿಂದ ಹೋಗಿದ್ದಾರೆ. ಜನಪರ ಹಾಗೂ ರೈತಪರವಾಗಿರುವ ವಾಗಿರುವುದು ಜೆಡಿಎಸ್ ಮಾತ್ರ. ರಾಜ್ಯದಲ್ಲಿ ಜೆಡಿಎಸ್ ಸರಕಾರ ಬರಲಿದ್ದು, ಕ್ಷೇತ್ರದಲ್ಲಿಯೂ ಜೆಡಿಎಸ್ ನ್ನು ಮತದಾರರು ಗೆಲ್ಲಿಸಬೇಕು ಎಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಎಲ್. ವೆಂಕಟೇಶ್ ಹೇಳಿದರು.


ಇಂದು ಸುಳ್ಯದಲ್ಲಿ ರೋಡ್ ಶೋ ನಡೆಸಿದ ಅವರು ಓಡಬಾಯಿಯಲ್ಲಿ ಮಾತನಾಡಿದರು. “ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದನ್ನು ಜನರು ಗಮನಿಸಿದ್ದಾರೆ. ಆದರೆ ಕುಮಾರ ಸ್ವಾಮಿ ಸರಕಾರ ಈ ಹಿಂದೆ ಮಾಡಿರುವ ಜನಪರ ಯೋಜನೆಯನ್ನು ಜನರು ನೆಚ್ಚಿಕೊಂಡಿದೆ. ಈಗಾಗಲೇ ಪಂಚ ರತ್ನ ಯೋಜನೆಯನ್ನು ಜನರಿಗಾಗಿ ತಂದಿದ್ದಾರೆ. ಇದೆಲ್ಲವನ್ನು ಜನರು ನೆಚ್ಚಿಕೊಂಡಿದ್ದು, ಈ ಬಾರಿ ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ ಎಂದು ಅವರು ಹೇಳಿದರು.


ರಸ್ತೆಯ ಎರಡೂ ಕಡೆಯಿರುವ ಅಂಗಡಿಗಳಿಗೆ ಹೋಗಿ ಪ್ರಣಾಳಿಕೆಯನ್ನು ನೀಡಿ ಮತ ಯಾಚನೆ ಮಾಡುತ್ತಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿಕುಮಾರ್, ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಬೆಳ್ಳಾರೆ ಉಸ್ತುವಾರಿ ಮಂಜಪ್ಪ ರೈ, ಗುತ್ತಿಗಾರು ಉದಯಕುಮಾರ್ ದೇರಪ್ಪಜ್ಜನಮನೆ, ಜಾಲ್ಸೂರು ಉಸ್ತುವಾರಿ ಲೋಲಾಕ್ಷ ಕಾರಿಂಜ, ಅರಂತೋಡು ಉಸ್ತುವಾರಿ ದೇವರಾಮ ಬಾಳೆಕಜೆ, ಪ್ರಮುಖರಾದ ಹನೀಫ್ ಅರಂತೋಡು, ರೋಹನ್ ಪೀಟರ್, ಜ್ಯೋತಿ ಪ್ರೇಮಾನಂದ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ರಾಮಚಂದ್ರ ಬಳ್ಳಡ್ಕ, ಚೋಮ ನಾವೂರು, ಹಸೈನಾರ್ ಅಜ್ಜಾವರ ಮೊದಲಾದವರಿದ್ದರು.