ಶಿಕ್ಷಕನ ಹೆಸರಿನಲ್ಲಿ ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡುವಂತೆ ಪತ್ರ

0

ನಿರಾಕರಿಸಿದ ಶಿಕ್ಷಕನಿಂದ ದೂರು ನೀಡಲು ಸಿದ್ಧತೆ

ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಸಚಿವರಾದ ಅಂಗಾರರಿಗೆ ಟಿಕೆಟ್ ನೀಡಿಲ್ಲವಾದ್ದರಿಂದ ಸಮುದಾಯದ ಎಲ್ಲರೂ ಕಾಂಗ್ರೆಸ್ ಅಭ್ಯರ್ಥಿ ಗೆ ಮತ ಹಾಕುವಂತೆ ಶಿಕ್ಷಕರೊಬ್ಬರ ಹೆಸರಿನಲ್ಲಿ ಪತ್ರವೊಂದು ಹರಿದಾಡುತ್ತಿದ್ದು, ಇದನ್ನು ಆ ಶಿಕ್ಷಕ ನಿರಾಕರಿಸಿದ್ದಾರಲ್ಲದೆ ಈ ಕುರಿತು ದೂರು‌ ನೀಡುವುದಾಗಿ ತಿಳಿಸಿದ್ದಾರೆ.

ಜಾಲ್ಸೂರು ನಿವಾಸಿ ಶಿಕ್ಷಕ ಶಿಶಿಧರ ಮಹಾಬಲಡ್ಕರ ಹೆಸರಿನಲ್ಲಿ ಈ ಪತ್ರ ಹರಿದಾಡುತ್ತಿದೆ. ಈ ಕುರಿತು ಸುದ್ದಿಯನ್ನು ಸಂಪರ್ಕಿಸಿ ಪ್ರತಿಕ್ರಿಯೆ ನೀಡಿರುವ ಶಿಕ್ಷಕ ಶಶಿಧರ್ ರವರು, “ಸಚಿವ ಅಂಗಾರರಿಗೆ ಟಿಕೆಟ್ ನೀಡಿಲ್ಲ. ಕಾಂಗ್ರೆಸ್ ಗೆ ಮತ ಹಾಕಿ ಎಂದು ನನ್ನ ಹೆಸರಿನಲ್ಲಿ ಪತ್ರವೊಂದು ಹರಿದಾಡುತ್ತಿದೆ. ನಾನು ಈ ರೀತಿ ಮಾಡಿಲ್ಲ. ನನ್ನ ವಿರುದ್ದ ಯಾರೋ ಷಡ್ಯಂತ್ರ ಮಾಡಿದ್ದಾರೆ. ನಾನು ಈಗ ಮಂಗಳೂರಿನಲ್ಲಿ ಎಲೆಕ್ಷನ್ ಡ್ಯೂಟಿಯಲ್ಕಿದ್ದೇನೆ.‌ ಈ ಪತ್ರದ ಕುರಿತು ನಾನು ದೂರು ನೀಡಿ ತನಿಖೆಗೆ ಒತ್ತಾಯಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.