ಬೆಳ್ಳಾರೆಗೆ ಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಗುರುಗಳ ಆಗಮನ, ಶ್ರೀ ಗುರುಕೃಪಾ ಸಂಕೀರ್ಣದ ಉದ್ಘಾಟನೆ

0

ಶ್ರೀ ಶಿವಾನಂದ ಸರಸ್ವತಿ ಮಹಾರಾಜ್ ಗುರುಗಳು ಇಂದು ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಆಗಮಿಸಿ, ದೇವಸ್ಥಾನದ ಆಶ್ರಯದಲ್ಲಿ ನೂತನವಾಗಿ‌ ನಿರ್ಮಾಣಗೊಂಡ ಶ್ರೀ ಗುರುಕೃಪಾ ಸಂಕೀರ್ಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಪೂರ್ವಾಹ್ನ ಉಡುಪಿ ಅತ್ರಾಡಿಯಿಂದ ಆಗಮಿಸಿ ಗುರುಗಳನ್ನು ದೇವಳದ ಬಳಿ ವೇದಘೋಷ ಮತ್ತು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ನೂತನ ಕಟ್ಟಡದ ಉದ್ಘಾಟನೆಯ ಬಳಿಕ ಗುರುಗಳು ಆಶೀರ್ವಚನ ನೀಡಿದರು.

ಮಧ್ಯಾಹ್ನ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಬಳಿಕ ಭೂರಿಭೋಜನ ನಡೆಯಲಿದೆ. ಅಪರಾಹ್ನ ಗಂಟೆ 3-30ಕ್ಕೆ ಗುರುಗಳು ಬೆಳ್ಳಾರೆ ಹೊರಟು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಶ್ರೀ ಸಂಪುಟ ನರಸಿಂಹ ಮಠಕ್ಕೆ ಭೇಟಿ ನೀಡಲಿದ್ದಾರೆ.


ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್, ಮೊಕ್ತೇಸರರಾದ ಮಣಿಕ್ಕಾರ ಲಕ್ಷ್ಮೀನಾರಾಯಣ ಶ್ಯಾನುಭಾಗ್, ಬಿ‌. ಸುರೇಶ್ ಶೆಣೈ, ಬಿ. ಕೃಷ್ಣ ಪೈ, ಮಿಥುನ್ ಶೆಣೈ, ಗೌಡ ಸಾರಸ್ವತ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ರಾಜೇಶ್ ಶ್ಯಾನುಭಾಗ್, ಸದಸ್ಯರು, ಭಜಕ ವೃಂದದವರು, ಭಕ್ತಾದಿಗಳು ಉಪಸ್ಥಿತರಿದ್ದರು.