ಕಾರು ಅಪಘಾತ: ಪಿ.ಬಿ.ಸುಧಾಕರ ರೈ ಪಾರು

0


ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈಯವರ ಕಾರು ಇಂದು ಬೆಳಿಗ್ಗೆ ಅಪಘಾತಕ್ಕೊಳಗಾಗಿದ್ದು, ಸುಧಾಕರ ರೈಯವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಪಿ.ಬಿ. ಸುಧಾಕರ್ ರೈಯವರು ತನ್ನ ಪತ್ನಿಯ ಮನೆಯಾದ ಮಣಿಪಾಲದಿಂದ ಇಂದು ಬೆಳಿಗ್ಗೆ ಸುಳ್ಯಕ್ಕೆ ಬರುತ್ತಿದ್ದರು. ಈ ವೇಳೆ ಪುತ್ತೂರಿನ ಕುಂಬ್ರದ ಬಳಿ ಗೋಣಿಕೊಪ್ಪದಿಂದ ಮಂಗಳೂರಿಗೆ ಹೋಗುತ್ತಿದ್ದ ಕಾರೊಂದಕ್ಕೆ ನಾಯಿ ಅಡ್ಡ ಬಂದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಕಾರು ಎದುರಿನಿಂದ ಬರುತ್ತಿದ್ದ ಬರುತ್ತಿದ್ದ ಪಿ.ಬಿ. ಸುಧಾಕರ್ ರೈ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.


ಗುದ್ದಿದ ರಭಸಕ್ಕೆ ಎರಡೂ ಕಾರುಗಳು ಕೂಡ ಜಖಂಗೊಂಡಿದೆ. ಸುಧಾಕರ ರೈಯವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.