ದರ್ಖಾಸ್ತು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

0

11 ಮಂದಿ ನಿರ್ದೇಶಕರಾಗಿ ಅವಿರೋಧ ಆಯ್ಕೆ

ದರ್ಖಾಸ್ತು ಹಾಲು ಉತ್ಪಾದಕರ ಸಹಕಾರಿ ಸಂಘದ 13 ನಿರ್ದೇಶಕರ ಸ್ಥಾನಕ್ಕೆ 11 ಮಂದಿ ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಸಲ್ಲಿಸಿದ್ದ ಎಲ್ಲರೂ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಸತ್ಯಶಂಕರ ಸಿ, ನಾಗೇಶ ಚೂಂತಾರು, ಗೋವಿಂದ ಮಣಿಯಾಣಿ, ಶಿವಶಂಕರ ಭಟ್ ಚೀಮುಳ್ಳು, ವಿನ್ಯಾಸ್ ಕಾವಿನಮೂಲೆ, ಕಾಮಿಲ್ ಫೆರಾವೋ ನೇಲ್ಯಮಜಲು, ಆರ್.ಕೆ.ಶ್ಯಾಮ್ ಪ್ರಸಾದ್ ಕುರುಂಬುಡೇಲು, ಹಿಂದುಳಿದ ಪ್ರವರ್ಗ ಎ ಸ್ಥಾನದಿಂದ ಬಾಲಕೃಷ್ಣ ಚೀಮುಳ್ಳು, ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸುಂದರ ಪುಡ್ಕಜೆ, ಮಹಿಳಾ ಮೀಸಲು ಸ್ಥಾನದಿಂದ ಪ್ರೇಮಲತಾ ಬಿ.ರೈ, ಪ್ರವೀಣ ಶೆಟ್ಟಿ ಪುಡ್ಕಜೆ ಯವರು ನಾಮಪತ್ರ ಸಲ್ಲಿಸಿದ್ದು ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುತ್ತೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಚುನಾವಣಾಧಿಕಾರಿಯಾಗಿದ್ದು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಂಘದ ಕಾರ್ಯದರ್ಶಿ ಶ್ರೀಮತಿ ಶಕುಂತಳಾ ನಾಗರಾಜ್ ಸಹಕರಿಸಿದರು.