ಸುಳ್ಯಕ್ಕೆ ನಿಗಮಾಧ್ಯಕ್ಷ ಸ್ಥಾನ

0

ಡಿಕೆಶಿ ಭೇಟಿಯಾಗಲು ಎಂ.ವಿ.ಜಿ. ಚಿಂತನೆ

ಸುಳ್ಯಕ್ಕೆ ಈ‌ ಬಾರಿ ಸೂಕ್ತ ಸ್ಥಾನಮಾನ ಸಿಗಬೇಕೆಂಬ ಬೇಡಿಕೆ ನಮ್ಮದು. ಅದಕ್ಕಾಗಿ ಶೀಘ್ರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತೇವೆ ಎಂದು ನಗರ ಪಂಚಾಯತ್ ಸದಸ್ಯ, ಕಾಂಗ್ರೆಸ್ ಮುಖಂಡ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಈ‌ ಬಾರಿ ಸುಳ್ಯಕ್ಕೆ ಸೂಕ್ತ ಸ್ಥಾನಮಾನ ಸಿಗಲೇಬೇಕು. ಕನಿಷ್ಢ ಪಕ್ಷ ಒಂದು ನಿಗಮಾಧ್ಯಕ್ಷ ಸ್ಥಾನ ಹಾಗೂ ಬೇರೆ ಬೇರೆ ನಿಗಮದ ನಿರ್ದೇಶಕ ಸ್ಥಾನ ಪಕ್ಷಕ್ಕಾಗಿ ದುಡಿದ ಅರ್ಹರಿಗೆ ಸಿಗಬೇಕೆಂಬ ಬೇಡಿಕೆ ನಮ್ಮದು. ನಾವು ಇದುವರೆಗೆ ಬೇಡಿಕೆ ಇಟ್ಟಿಲ್ಲ. ಈ‌ಬಾರಿ ಒತ್ತಾಯ‌ ಮಾಡುತ್ತೇವೆ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗುತ್ತದೆ ಎಂಬ ವಿಶ್ವಾಸ ನಮಗಿದೆ. ಸ್ಥಾನಮಾನ ಸಿಕ್ಕಿದಾಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗುತ್ತದೆ ಎಂದು ಅವರು‌ ಹೇಳಿದರು.

ಜೂ.20 ರಂದು ಪ್ರೆಸ್‌ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.