ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿದ ಕಾಂಗ್ರೆಸ್ ಮುಖಂಡರು

0

ಸುಳ್ಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಮನವಿ

ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಸುಳ್ಯ ಕಾಂಗ್ರೆಸ್ ಮುಖಂಡರು ಭೇಟಿ ನೀಡಿದರು.


ಡಾ.ರಘು, ನಂದಕುಮಾರ್, ಸಚಿನ್ ರಾಜ್ ಶೆಟ್ಟಿ, ಪ್ರವೀಣ್ ಕೆಡೆಂಜಿ ಗುತ್ತು, ಗೋಕುಲ್ ದಾಸ್, ಭವಾನಿ ಶಂಕರ ಕಲ್ಮಡ್ಕ, ಉಷಾ ಅಂಚನ್, ಚೇತನ್ ಕಜೆಗದ್ದೆ, ಆಶಾಲಕ್ಷ್ಣಣ, ಫೈಸಲ್, ಶಶಿಧರ ಎಂ ಜೆ, ಸುದೀರ್ ದೇವಾಡಿಗರವರು ಭೇಟಿ ಮಾಡಿ ಸುಳ್ಯ ಮತ್ತು ಕಡಬ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಮತ್ತು ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವಂತೆ , ಸುಳ್ಯಕ್ಕೆ ಡಯಲಾಲಿಸ್ ವ್ಯವಸ್ಥೆ ಹೆಚ್ಚುವರಿ ಮಾಡಲು ಮನವಿ ಮಾಡಿದರು.


ಇದರ ಬಗ್ಗೆ ಸೂಕ್ತ ಪರಿಶೀಲನೆ ಮಾಡಿ ಪರಿಹಾರ ಒದಗಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.