ಪೈಂಬೆಚ್ಚಾಲು ಶಾಲೆಯಲ್ಲಿ ‌ವನಮಹೋತ್ಸವ

0

ಕರ್ನಾಟಕ ಅರಣ್ಯ‌ಇಲಾಖೆ ಮಂಗಳೂರು ವಿಭಾಗ, ಸುಳ್ಯ‌ವಲಯ ಆಲೆಟ್ಟಿ ಶಾಖೆಯ ವತಿಯಿಂದ ಪೈಂಬೆಚ್ಚಾಲು ಶಾಲೆಯಲ್ಲಿ ವನಮಹೋತ್ಸವ ‌ಹಾಗೂ ಬಿತ್ತೋತ್ಸವ ಕಾರ್ಯಕ್ರಮ ‌ಜೂ.26 ರಂದು ನಡೆಯಿತು.

ಶಾಲಾ ಮಕ್ಕಳಿಂದ ಮೇದಿನಡ್ಕ ಪಶ್ಚಿಮ ಮೀಸಲು ಅರಣ್ಯ ದಲ್ಲಿ‌ ವಿವಿಧ ಜಾತಿಯ ಬೀಜಗಳನ್ನು ಬಿತ್ತುವ ಮೂಲಕ ಬಿತ್ತೋತ್ಸವ ನಡೆಯಿತು.
ಕಾರ್ಯಕ್ರಮಸ ಅಧ್ಯಕ್ಷತೆಯನ್ನು ಪೈಂಬೆಚ್ಚಾಲು ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಫೈಜಿ ವಹಿಸಿದ್ದರು.

ಗ್ರಾ.ಪಂ. ಸದಸ್ಯೆ ‌ಗೀತಾ‌ ಕೋಲ್ಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ‌ಅತಿಥಿಗಳಾಗಿ ಗ್ರಾ.ಪಂ. ಸದಸ್ಯರುಗಳಾದ ಕುಸುಮಾವತಿ, ಧರ್ಮಪಾಲ‌ ಕೊಯಿಂಗಾಜೆ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷೆ ಶಂಕರಿ, ದೇರಣ್ಣ ಮಾಣಿಮರ್ದು, ಉಪವಲಯಾರಣ್ಯಾಧಿಕಾರಿ ವೆಂಕಟೇಶ್, ಶಾಲಾ ಮುಖ್ಯ ಗುರು ವಿಶಾಲಾಕ್ಷಿ ಇದ್ದರು.‌ಶಿಕ್ಷಕಿ ಪ್ರತಿಮಾ ಸ್ವಾಗತಿಸಿ, ಕಾರ್ಯಕ್ರಮ ‌ನಿರೂಪಿಸಿದರು.