ಸುಳ್ಯಅಮರ ಸಂಘಟನಾ ಸಮಿತಿ ವತಿಯಿಂದ ಯೋಗ ದಿನಾಚರಣೆ

0

ಡಾ.ಗೋಪಾಲಕೃಷ್ಣ ಪೈಲೂರು ರಿಗೆ “ಅಮರ ರತ್ನ” ಪ್ರಶಸ್ತಿ ಪ್ರದಾನ

ಸುಳ್ಯ ಅಮರ ಸಂಘಟನಾ ಸಮಿತಿ ಆಶ್ರಯದಲ್ಲಿ 6ನೇ ವರ್ಷದ ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ಅಮರ ಮ್ಯಾರಥಾನ್ ಯೋಗ ಪ್ರಾತ್ಯಕ್ಷಿಕೆ ಮತ್ತು ಅಮರ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವು ಜೂ. 25 ರಂದು ಅಮರಮುಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಪೈಲಾರು ಶ್ರೀ ರಾಮ ಭಜನಾ ಮಂಡಳಿಯ ಅಧ್ಯಕ್ಷ ನಾರಾಯಣ ಕೋಡ್ತುಗುಳಿ ಮ್ಯಾರಥಾನ್ ಗೆ ಚಾಲನೆ ನೀಡಿದರು. ಬಳಿಕ ನಡೆದ ಸಮಾರಂಭದಲ್ಲಿ
ಹಿರಿಯ ವೈದ್ಯರಾದ ಡಾ. ಗೋಪಾಲಕೃಷ್ಣ ಪೈಲೂರು ರವರನ್ನು “ಅಮರ ರತ್ನ” ಪ್ರಶಸ್ತಿ ಪ್ರದಾನ ಮಾಡುವುದರೊಂದಿಗೆ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಪ್ರವೀಣ್ ಕುಲಾಲ್ ಪೈಲಾರು, ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ತೇಜಸ್ವಿ ಕಡಪಳ ಉಪಸ್ಥಿತರಿದ್ದರು. ಯೋಗ ಶಿಕ್ಷಕಿ ಸುನಂದ ಶೆಟ್ಟಿ ಸುಳ್ಯ ಯೋಗದ ಕುರಿತು ಪ್ರಾತ್ಯಕ್ಷಿಕೆ ನಡೆಸಿದರು.

ಮ್ಯಾರಥಾನ್ ನಲ್ಲಿ ಭಾಗವಹಿಸಿದ ಪುರುಷರ ವಿಭಾಗದಲ್ಲಿ ಅಭಿಲಾಷ್ ಪೈಲಾರು(ಪ್ರಥಮ), ಜಿತೇಷ್ ಚೊಕ್ಕಾಡಿ (ದ್ವಿತೀಯ), ಪುನೀತ್ ರಾಜ್ ಸಂಕೇಶ(ತೃತೀಯ) ಮತ್ತು ಮಹಿಳೆಯರ ವಿಭಾಗ ರಮ್ಯಾ ಪೈಲಾರು (ಪ್ರಥಮ), ಶ್ರೇಯಾ ಮೂಡೆಕಲ್ಲು(ದ್ವಿತೀಯ), ಅನುಶ್ರೀ ಪೈಲೂರು(ತೃತೀಯ) ಸ್ಥಾನಿಯಾದರು. ಕೋಶಾಧಿಕಾರಿ ರಜನಿಕಾಂತ್ ಉಮ್ಮಡ್ಕ ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.