ಕೊಡಿಯಾಲ : ಶ್ರೀ ಗೌರಿ ಸಂಜೀವಿನಿ ಒಕ್ಕೂಟದ ಪದಗ್ರಹಣ

0

ಶ್ರೀ ಗೌರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕೊಡಿಯಾಲ ಇದರ ನೂತನ ಸಮಿತಿಯ ಪದಗ್ರಹಣ ಜೂ.26ರಂದು ಗ್ರಾಮ ಪಂಚಾಯತ್ ನ ಗ್ರಂಥಾಲಯದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರದೀಪ್ ರೈ ಅಜಿರಂಗಳ ನೆರವೇರಿಸಿದರು. ಬಳಿಕ ನೂತನ ಸಮಿತಿಗೆ ಶುಭ ಹಾರೈಸಿದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಂತ್ ಯು ಬಿ ಅವರು ಮಹಿಳೆಯರು ಸ್ವಾವಲಂಬಿಗಳಾಗಲು ಹಾಗೂ ಒಕ್ಕೂಟದ ಬಲವರ್ಧನೆಗೆ ಪಂಚಾಯತ್ ತನ್ನಿಂದಾದ ಸಹಕಾರ ನೀಡುತ್ತದೆ ಎಂದು ತಿಳಿಸಿದರು. ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತ ಎನ್ ಆರ್ ಎಲ್ ಎಂ ನಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ನೂತನ ಸಮಿತಿ ರಚಿಸಲಾಯಿತು. ಒಕ್ಕೂಟದ ನೂತನ ಸಮಿತಿಯ ಅಧ್ಯಕ್ಷರಾಗಿ ಶೋಭಾ, ಉಪಾಧ್ಯಕ್ಷರಾಗಿ ಮೀನಾಕ್ಷಿ ,ಕಾರ್ಯದರ್ಶಿ ಯಾಗಿ ಜಯಂತಿ ,ಕೋಶಾಧಿಕಾರಿಯಾಗಿ ಸರೋಜ ಆಯ್ಕೆಯಾದರು.

ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಪುಸ್ತಕ ಹಸ್ತಾಂತರಿಸುವ ಮೂಲಕ ನೂತನ ಸಮಿತಿಗೆ ಚಾಲನೆ ನೀಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಪಿ. ಡಿ. ಒ, ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಒ. ಮಾಜಿ ಅಧ್ಯಕ್ಷರು, ಕಾರ್ಯದರ್ಶಿ, ನೂತನ ಅಧ್ಯಕ್ಷ, ಕಾರ್ಯದರ್ಶಿ, ಉಪಾಧ್ಯಕ್ಷರು ಕೋಶಾಧಿಕಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷಿ ಸಖಿ ,ಪಶು ಸಖಿ, ಎಫ್ ಎಲ್ ಸಿ ಆರ್ ಪಿ, ಎಂಬಿಕೆ, ಎಲ್ ಸಿ ಆರ್ ಪಿ, ಗೃಂಥಾಲಯ ಮೇಲ್ವಿಚಾರಕಿ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಎಲ್ ಸಿ ಆರ್ ಪಿ ವನಿತಾ ದೇವತಾ ಪ್ರಾರ್ಥನೆಗೈದರು. ಎಂಬಿಕೆ ಯಶೋದಾ ಸ್ವಾಗತಿಸಿ, ಎಫ್ ಎಲ್ ಸಿ ಆರ್ ಪಿ ರಮ್ಯ ವಂದಿಸಿದರು.