ಕೆ.ವಿ.ಜಿ. ದಂತಮಹಾವಿದ್ಯಾಲಯ, ಸುಳ್ಯ: ಮುಂದುವರಿದ ದಂತ ಶಿಕ್ಷಣ ಕಾರ್ಯಕ್ರಮ

0

ಕೆ.ವಿ.ಜಿಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಮುಂದುವರಿದ ದಂತ ಶಿಕ್ಷಣ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜೂ.೩೦ ರಂದು ನಡೆಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲೆ ಡಾ|ಮೋಕ್ಷಾನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ, ಮುಂದುವರಿದ ದಂತ ಶಿಕ್ಷಣ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.


ಛತ್ತಿಸ್‌ಗಡ ರಾಜ್ಯದ ರಾಯಪುರದ ಖ್ಯಾತ ದಂತ ವೈದ್ಯೆ ಡಾ| ಕೃಷ್ಣವ್ಯಾಸ್ ಮುಖ್ಯಅತಿಥಿಯಾಗಿದ್ದು, ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನೀಡಿದರು. ಈ ಸಂದರ್ಭದಲ್ಲಿ ರಾಯಪುರದ ಖ್ಯಾತ ದಂತ ವೈದ್ಯ ಡಾ| ಸುನಿಲ್‌ವ್ಯಾಸ್ ಉಪಸ್ಥಿತರಿದ್ದರು.


ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ| ಕೃಷ್ಣಪ್ರಸಾದ್ ಎಲ್. ಸ್ವಾಗತಿಸಿ, ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗದ ಡಾ| ನವೀನ್‌ಕುಮಾರ್ ಕೆ. ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ| ಕೃಷ್ಣವೇಣಿ ಮರೆಲ್ಲಾ ವಂದಿಸಿ, ಡಾ| ಮನೀಷಾ ರೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ ಎಲ್ಲಾ ದಂತ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.