ಬೆಳ್ಳಾರೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ ಉದ್ಘಾಟನೆ

0

ನಂಬಿಕೆ,ಪ್ರೀತಿ,ವಿಶ್ವಾಸದಿಂದ ಸಹಕಾರಿ ಸಂಸ್ಥೆಗಳ ಅಭಿವೃದ್ಧಿ – ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ

“ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ 9 ನೇ ಶಾಖೆ ಬೆಳ್ಳಾರೆಯಲ್ಲಿ ಉದ್ಘಾಟನೆಗೊಂಡಿದೆ.
ಪರಸ್ಪರ ಸಹಕಾರ ,ಪ್ರೀತಿ,ಶ್ರದ್ಧೆಯನ್ನು ಇಟ್ಟುಕೊಂಡಿರುವ ಸಹಕಾರಿ ಸಂಸ್ಥೆ ಆರ್ಥಿಕವಾಗಿ ಮುನ್ನಡೆಯುತ್ತದೆ.
ಜ್ಞಾನ ಶಕ್ತಿ,ಇಚ್ಛಾಶಕ್ತಿ,ಕ್ರಿಯಾಶಕ್ತಿಗಳು ಅಂತರ್ಯದಲ್ಲಿ ಬೆಳೆಯಬೇಕು.ಪ್ರೀತಿ,ನಂಬಿಕೆ,ವಿಶ್ವಾಸಗಳಿಂದ ಸಹಕಾರಿ ಸಂಘದ ಅಭಿವೃದ್ಧಿ ಸಾಧ್ಯ.ಬ್ರಿಟಿಷರ ಖಜಾನೆಯೂ ಬೆಳ್ಳಾರೆಯಲ್ಲಿತ್ತು ಎಂದು ಹೇಳಿ ಕೆದಂಬಾಡಿ ರಾಮಯ್ಯ ಗೌಡರ ಹೋರಾಟವನ್ನು ನೆನಪಿಸಿಕೊಂಡರು.


ಸಹಕಾರಿ ಸಂಘದ ಜೊತೆ ಆಧ್ಯಾತ್ಮಿಕ ಕೇಂದ್ರವನ್ನು ಕೂಡ ಸ್ಥಾಪಿಸಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.


ಅವರು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಇದರ ಪ್ರಾಯೋಜಕತ್ವದಲ್ಲಿ ಪ್ರಾರಂಭಗೊಂಡಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆಯನ್ನು ಬೆಳ್ಳಾರೆ ಕಾತ್ಯಾಯಿನಿ ಕಾಂಪ್ಲೆಕ್ಸ್‌ನಲ್ಲಿ ಜು.06 ರಂದು ಉದ್ಘಾಟಿಸಿ ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು.
ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ ಸಂಘವು 2002 ರಲ್ಲಿ 20 ಮಂದಿ ಸಮಾನ ಮನಸ್ಕರ ತಂಡದಿಂದ ಸಂಘವು ಪ್ರಾರಂಭಗೊಂಡಿತು.
4 ಲಕ್ಷ ಬಂಡವಾಳದಿಂದ ಪ್ರಾರಂಭಗೊಂಡ ಸಹಕಸರ ಸಂಘ ನಿರಂತರವಾಗಿ ಸಂಘದ 8 ಶಾಖೆಗಳನ್ನು ಪ್ರಾರಂಭಿಸಿಕೊಂಡು ಕಳೆದ ವರ್ಷ 1.5 ಕೋಟಿ ಲಾಭ ಗಳಿಸಿದೆ.ಸಲಹಾ ಸಮಿತಿ ಮತ್ತು ಸಿಬ್ಬಂದಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.


ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ,
ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ, ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇದರ ಸಂಚಾಲಕ ಎಂ.ಪಿ.ಉಮೇಶ್, ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕಾತ್ಯಾಯಿನಿ ಕಾಂಪ್ಲೆಕ್ಸ್ ಮಾಲಕ ಬಿ ಪವನ್ ಶೆಣೈ ಉಪಸ್ಥಿಯರಿದ್ದು ಮಾತನಾಡಿದರು.


ನಿರ್ದೇಶಕರಾದ. ಜಿನ್ನಪ್ಪ ಗೌಡ ಮಳುವೇಲು, ಸಂಜೀವ ಗೌಡ ಕೆ, ಪ್ರವೀಣ್ ಕುಂಟ್ಯಾನ, ಶ್ರೀಮತಿ ಸುಪ್ರೀತಾ ರವಿಚಂದ್ರ, ರಾಮಕೃಷ್ಣ ಗೌಡ ಕರ್ಮಲ, ಸುದರ್ಶನ ಗೌಡ ಕೆ, ಶ್ರೀಮತಿ ತೇಜಸ್ವಿನಿ ಶೇಖರ ಗೌಡ ಬೆಳ್ಳಾರೆ ಶಾಖೆಯ ಉಸ್ತುವಾರಿ ನಿರ್ದೇಶಕರಾದ ಸತೀಶ್ ಪಾಂಬಾರು ಮತ್ತು ಲೋಕೇಶ್ ಚಾಕೋಟೆ ಉಪಸ್ಥಿತರಿದ್ದರು.


ಶಾಖೆಯ ಸಲಹಾ ಸಮಿತಿ ಸದಸ್ಯರಾದ ಎಲ್ಯಣ್ಣ ಗೌಡ ಕುಳ್ಳಂಪಾಡಿ,ಉಮೇಶ್ ಕೆ.ಎಂ.ಬಿ, ವಾಸುದೇವ ಗೌಡ ನಡ್ಕ, ಎಂ.ಪಿ.ಉಮೇಶ್, ಮುರಳೀಧರ ಕೆಮ್ಮಾರ,ರವೀಂದ್ರ ಗೌಡ ಮರಕ್ಕಡ,ಪದ್ಮನಾಭ ಗೌಡ ಬೀಡು, ನಾರಾಯಣ ಗೌಡ, ಸಂಘದ ಸಿಬ್ಬಂದಿ ವರ್ಗದವರಾದ ಕಾರ್ತಿಕ್ ಎಂ, ಭವ್ಯ,ದೇವರಾಜ್ ರವರನ್ನು ಹಾಗೂ ಸಂಘಕ್ಕೆ ಸಹಕಾರ ನೀಡಿದವರನ್ನು ಸ್ವಾಮೀಜಿಯವರು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಗೌರವಿಸಿದರು.


ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆಯವರು ಸನ್ಮಾನಿತರ ಹೆಸರು ವಾಚಿಸಿದರು.
ನಿರ್ದೇಶಕರಾದ ಶ್ರೀಮತಿ ತೇಜಸ್ವಿನಿ ಶೇಖರ ಗೌಡ ಪ್ರಾರ್ಥಿಸಿ,ನಿರ್ದೇಶಕ ಸತೀಶ್ ಪಾಂಬಾರು ಸ್ವಾಗತಿಸಿ,ವಸಂತ ಎಸ್.ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಲೋಕೇಶ ಚಾಕೋಟೆ ವಂದಿಸಿದರು.