ಸುಬ್ರಹ್ಮಣ್ಯ: ಯಾತ್ರಾರ್ಥಿ ಮಹಿಳೆ ಆತ್ಮಹತ್ಯೆ

0

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಬಂದ ಮಹಿಳೆಯೊಬ್ಬರು ಸಮೀಪದ ಕಾಡಿಗೆ ತೆರಳಿ ಅಲ್ಲಿ ದೇವರಗದ್ದೆ ಬಳಿ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಮೂಲತ ಬೆಂಗಳೂರಿನ ನೆಲಮಂಗಲದವರಾಗಿದ್ದು ಹೆಸರು ಗಂಗ ಲಕ್ಷ್ಮಮ್ಮ ಎಂಬದಾಗಿ ತಿಳಿದು ಬಂದಿದೆ. ಅವರಿಗೆ 60 ವರ್ಷ ವಯಸ್ಸಾವಾಗಿತ್ತು, ಸುಬ್ರಹ್ಮಣ್ಯದ ದೇವರ ಗದ್ದೆಯ ಕಾಡಿನಲ್ಲಿ 2-3 ದಿನಗಳಲ್ಲಿ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಇವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದರೆನ್ನಲಾಗಿದೆ. ಆದರೆ ಆತ್ಮಹತ್ಯೆ ಮಾಡಿರುವ ಕಾರಣ ತಿಳಿದು ಬಂದಿಲ್ಲ. ಸದ್ಯ ಸುಬ್ರಹ್ಮಣ್ಯ ಪೊಲೀಸರು ಜೂ.6 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.