ಕುಮಾರಸ್ವಾಮಿ ವಿದ್ಯಾಲಯದಲ್ಲಿ ಲಲಿತಕಲಾ ತರಗತಿಗಳ ಉದ್ಘಾಟನೆ

0

ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ2023-24 ಶೈಕ್ಷಣಿಕ ವರ್ಷದ ಲಲಿತಕಲಾ ತರಗತಿಗಳ ಉದ್ಘಾಟನೆಯು ಇಂದು ಸಂಸ್ಥೆಯಲ್ಲಿ ನಡೆಯಿತು.

ಎಸ್.ಎಸ್.ಪಿ.ಯು ಕಾಲೇಜಿನ ಶಿಕ್ಷಕ ರಘು ಬಿಜೂರು ಉದ್ಘಾಟನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹತ್ತನೇ ತರಗತಿಯ ಕುಮಾರಿ ಪ್ರಸನ್ನ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಂಚಾಲಕರಾದ ಚಂದ್ರಶೇಖರ್ ನಾಯರ್, ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರತ್ನ ಭರತನಾಟ್ಯ ಶಿಕ್ಷಕಿ ರಶ್ಮಿ ಶೆಟ್ಟಿ ಪುತ್ತೂರು, ಸಂಗೀತ ಶಿಕ್ಷಕಿ ರಮ್ಯ ದಿಲೀಪ್, ಚಿತ್ರಕಲಾ ಶಿಕ್ಷಕ ಪ್ರಸನ್ನ ಐವರ್ನಾಡು, ಚೆಸ್ ಮಾಸ್ಟರ್ ಜಗನ್ನಾಥ್ ಉಪಸ್ಥಿತರಿದ್ದರು.

ಕುಮಾರಿ ನಿರೀಕ್ಷ ಸ್ವಾಗತಿಸಿದರು, ಕೌಶಲ್ ವಂದಿಸಿದರು. ಕುಮಾರಿ ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು.