ಐವರ್ನಾಡು : ಪೊಲೀಸ್ ಠಾಣೆ ಮೆಟ್ಟಲೇರಿದ ಮಾತಿನ ಚಕಮಕಿ‌

0

ಕಾರಿನಿಂದ ತಲವಾರು ತೆಗೆದು ಹಲ್ಲೆಗೆ ಯತ್ನ: ದೂರು

ಐವರ್ನಾಡಿನಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬರು ಕಾರಿನಿಂದ ತಲವಾರು ತೆಗೆದ ಘಟನೆ ಇಂದು ನಡೆದಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಐವರ್ನಾಡಿನಲ್ಲಿ ರಸ್ತೆ ಬದಿ ಪ್ರವೀಣ್ ಎಂಬವರು ಬಾಡಿಗೆ ರೂಮ್ ಮಾಡಿಕೊಂಡಿದ್ದು ಅಲ್ಲಿ ಬಿಲ್ಡಿಂಗ್ ಸಮೀಪವಿರುವ ನಳ್ಳಿನೀರಿಗೆ ಧರ್ಮಲಿಂಗಂ ಎಂಬವರು ಕೈ ಕಾಲು ತೊಳೆಯಲೆಂದು ಬಂದರೆನ್ನಲಾಗಿದೆ.
ಆಗ ಪ್ರವೀಣ್ ಎಂಬವರು ಧರ್ಮಲಿಂಗಂರವಲ್ಲಿ ನೀವು ಇಲ್ಲಿಗೆ ಯಾಕೆ ಬಂದು ಕೈ ಕಾಲು ತೊಳೆಯುವುದು? ನಳ್ಳಿ ನೀರಿನ ಬಿಲ್ಲು ನಾನು ಕಟ್ಟುವುದು ಎಂದರೆನ್ನಲಾಗಿದೆ.ಆಗ ಇಬ್ಬರಿಗೂ ಮಾತಿನ ಚಕಮಕಿ ನಡೆದು ಪ್ರವೀಣ್ ಎಂಬವರು ಓಡಿ ಹೋಗಿ ಪೆಟ್ರೋಲ್ ಪಂಪಿನಲ್ಲಿ ನಿಲ್ಲಿಸಿದ್ದ ತನ್ನ ಕಾರಿನಿಂದ ತಲವಾರು ತಂದರೆನ್ನಲಾಗಿದೆ.


ಆಗ ಅಲ್ಲಿದ್ದವರು ಸೇರಿ ಪ್ರವೀಣರನ್ನು ಸಮಾಧಾನಪಡಿಸಿದರೆನ್ನಲಾಗಿದೆ.
ಈ ಬಗ್ಗೆ ಧರ್ಮಲಿಂಗಂರವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಓಡಿ ಹೋಗಿ ಕಾರಿನಿಂದ ತಲವಾರು ತೆಗೆಯುವ ದೃಶ್ಯ ಸಿ.ಸಿ.ಕ್ಯಾಮರದಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.