ಯಾದವ ಸಭಾ ಪ್ರಾದೇಶಿಕ ಸಮಿತಿ ಬೆಟ್ಟ ಆಟಿಟೊಂಜಿ ದಿನ : ಸುದ್ದಿ ಜನಾಂದೋಲನ ಘೋಷಣೆ

0

ಯಾದವ ಸಭಾ ಬೆಟ್ಟ ಪ್ರಾದೇಶಿಕ ಸಮಿತಿ ಆಟಿಟೊಂಜಿ ದಿನ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜುಲೈ 30ರಂದು ಬೊಳ್ಳಾಜೆ ಶಾಲಾ ಮೈದಾನದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಸುದ್ದಿ ಜನಾಂದೋಲನ ಫಲಕವನ್ನು ಘೋಷಣೆ ಮಾಡಲಾಯಿತು. ಘೋಷಣೆಯನ್ನು ಯಾದವ ಸಭಾ ಬೆಟ್ಟ ಪ್ರಾದೇಶಿಕ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಿತ್ರಾ ದಿನೇಶ್ ಕಿಲಾರ್ಕಜೆ ವಾಚಿಸಿದರು. ವೇದಿಕೆಯಲ್ಲಿ ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ, ಪ್ರಾದೇಶಿಕ ಸಮಿತಿ ಕಾರ್ಯದರ್ಶಿ ಕೃಷ್ಣ ಬೆಟ್ಟ,

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಯಾನಂದ ಕೊರತ್ತೋಡಿ, ಮಾಜಿ ಯೋಧ ಉಮೇಶ ಇಂತಿಕಲ್ಲು, ಬೆಟ್ಟ ಪ್ರಾದೇಶಿಕ ಸಮಿತಿ ಅಧ್ಯಕ್ಷ ಚಂದ್ರಹಾಸ ಕಿಲಾರ್ಕಜೆ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಶೇಖರ ಬೊಳ್ಳಾಜೆ, ನೆಲ್ಲೂರು ಕೇಮ್ರಾಜೆ ಗ್ರಾ. ಪಂ ಅಧ್ಯಕ್ಷೆ ಶೀಲವತಿ ಬೊಳ್ಳಾಜೆ, ಸುಮಿತ್ರಾ ಕಿಲಾರ್ಕಜೆ, ಲಕ್ಷ್ಮಣ ಬೊಳ್ಳಾಜೆ, ಅಶೋಕ ಬೆಟ್ಟ, ಜಯರಾಮ ಹೈದಂಗೂರು ಕಾರ್ಯಕ್ರಮ ನಿರೂಪಣೆಯನ್ನು ಜಯರಾಮ ಹೈದಂಗೂರು ನೆರವೇರಿಸಿದರು.

ಬಹುಮಾನದ ಪಟ್ಟಿಯನ್ನು ಆರತಿ ಉಮೇಶ ಮತ್ತು ಸುಮಿತ್ರ ಕಿಲಾರ್ಕಜೆ ವಾಚಿಸಿದರು.ಪ್ರಾರ್ಥನೆಯನ್ನು ಮಾನ್ವಿ ಕಿಲಾರ್ಕಜೆ ನೆರವೇಸಿದರು.