ಮಾಮಾ.. ಸೌಜನ್ಯ ಅಕ್ಕಂಗೆ ನ್ಯಾಯ ಸಿಗುತ್ತೆ ಅಲ್ವಾ?

0

ಜ್ಯೋತಿ ಹಸ್ತಾಂತರಿಸಿ ಪುಟಾಣಿ ಡಿಂಪಲ್ ಪ್ರಶ್ನೆಗೆ ತಿಮರೋಡಿ ಹೇಳಿದ್ದೇನು ಗೊತ್ತೆ?

ಪ್ರತಿಭಟನಾ ಸಭೆಯನ್ನು ದಿ.ಸೌಜನ್ಯಳ ತಾಯಿ ಕುಸುಮಾವತಿ ದೀಪ ಬೆಳಗಿಸಿ ಉದ್ಘಾಟಿಸಿದರು.


ಬಳಿಕ ಅದೇ ದೀಪವನ್ನು ಒಂದು ಪುಟ್ಟ ಮಗುವಿನ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಹಸ್ತಾಂತರ ಮಾಡಿದಾಗ ಆ ಪುಟ್ಟ ಮಗು ಮಾಮಾ ಸೌಜನ್ಯ ಅಕ್ಕಳಿಗೆ ನ್ಯಾಯ ದೊರಕಿಸಿ ಕೊಡುತ್ತೀರಲ್ಲವೇ? ಎಂಬ ಪ್ರಶ್ನೆಯನ್ನು ಕೇಳುವಾಗ ದೀಪವನ್ನು ಸ್ವೀಕರಿಸಿದ ತಿಮರೋಡಿಯವರು ಹೌದು ಮಗಳೇ, ಸೌಜನ್ಯಗಳಿಗೆ ನ್ಯಾಯ ದೊರಕಿಸಿ ಕೊಡುತ್ತೇನೆ ಎಂಬ ಮಾತಿನೊಂದಿಗೆ ದೀಪವನ್ನು ಸ್ವೀಕರಿಸಿದ ಕ್ಷಣ ಎಲ್ಲರ ಕಣ್ಣು ನೆನೆಯುವಂತೆ ಮಾಡಿತು.