ವಿಷ್ಣು ಸರ್ಕಲ್ ಬಳಿ ಎರಡು ಗೂಡಂಗಡಿಗಳಲ್ಲಿ ಕಳ್ಳತನ

0

ಅಂಗಡಿಯ ಬೀಗ ಮುರಿದು ಹಣ ಮತ್ತು ಸಿಗರೇಟ್ ಸಮಾಗ್ರಿಗಳನ್ನು ಕದ್ದೋಯ್ದ ಖದೀಮರು

ಸುಳ್ಯ ವಿಷ್ಣು ಸರ್ಕಲ್ ಬಳಿ ಇರುವ ಎರಡು ಗೂಡಂಗಡಿಯ ಬಾಗಿಲು ಮುರಿದು ಅಂಗಡಿಯಲ್ಲಿದ್ದ ಸಿಗರೇಟ್ ಸಾಮಾಗ್ರಿಗಳು ಸೇರಿದಂತೆ ಕ್ಯಾಶ್ ಡಬ್ಬದಲ್ಲಿದ್ದ ಮೊತ್ತವನ್ನು ಕಳ್ಳರು ಕದ್ದೋಯ್ದ ಘಟನೆ ಆ 11 ರಂದು ರಾತ್ರಿ ನಡೆದಿದೆ.

ವಿಷ್ಣು ಸರ್ಕಲ್ ಬಳಿ ಇರುವ ವೆಂಕಪ್ಪ ಗೌಡ ನಡುಮನೆಯವರ ಅಂಗಡಿ, ಮತ್ತು ಮುಂಭಾಗದಲ್ಲಿರುವ ಅವಿಲ್ ಮಿಲ್ಕ್ ಹೆಸರಿನ ಗೂಡಂಗಡಿಯಲ್ಲಿ ಈ ಕಳ್ಳತನ ನಡೆದಿದೆ.

ವೆಂಕಪ್ಪ ಗೌಡರ ಗೂಡಂಗಡಿಯ ಬಾಗಿಲ ಬೀಗ ವನ್ನು ಮುರಿದು ಅದರೊಳಗಿದ್ದ ಸಿಗರೇಟ್ ಪಾಕೆಟ್ ಗಳು ಅಲ್ಲದೆ ಡಬ್ಬದಲ್ಲಿ ಶೇಖರಿಸಿದ್ದ ಸುಮಾರು 5 ಸಾವಿರ ರೂಗಳನ್ನು

ಕಳ್ಳರು ಕಳ್ಳತನ ಮಾಡಿದ್ದು, ಮುಂಭಾಗದ ಅವಿಲ್ ಮಿಲ್ಕ್ ಅಂಗಡಿಯ ಬಾಗಿಲನ್ನು ಮುರಿದು ಕ್ಯಾಶ್ ಡಬ್ಬದಲ್ಲಿದ್ದ ಚಿಲ್ಲರೆ ಹಣವನ್ನು ಪೂಜಿಕೊಂಡು ಹೋಗಿರುವುದಾಗಿ ತಿಳಿದುಬಂದಿದೆ.

ಕಳ್ಳತನಕ್ಕೆ ತಂದಿರುವ ಕಬ್ಬಿಣದ ರಾಡನ್ನು ಕಳ್ಳರು ಅಂಗಡಿಯ ಬಳಿಯೇ ಬಿಟ್ಟು ಹೋಗಿದ್ದು ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸ್ಥಳೀಯ ಅಂಗಡಿಯಿಂದ ವಿಡಿಯೋ ಫುಟೆಜ್ ಮಾಹಿತಿ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.