ಆಧಾರ್ ಕಾರ್ಡ್ ಬದಲಾವಣೆಗೆ ಅರಂತೋಡಿಗೆ ಬಂದ ಚೆಂಬು ಗ್ರಾಮದ ವ್ಯಕ್ತಿ ನಾಪತ್ತೆ: ಪೋಲಿಸ್ ದೂರು

0

ಆದಾರ್ ಕಾರ್ಡ್ ತಿದ್ದುಪಡಿ ಮಾಡಲೆಂದು ಅರಂತೊಡಿಗೆ ಬಂದಿದ್ದ ಚೆಂಬು ಗ್ರಾಮದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಆ.8 ರಂದು ಚೆಂಬುಗ್ರಾಮದ ಮಿನುಂಗೂರು ಮನೆ ಬಾಲಕೃಷ್ಣ (65 ವರ್ಷ) ಅರಂತೋಡಿಗೆ ತೆರಳಿದ್ದು ಅಲ್ಲಿಂದ ಸುಳ್ಯ ಕಡೆಗೆ ವ್ಯಾನ್ ನಲ್ಲಿ ಹೋಗಿ ಮತ್ತೆ ಮನೆಗೆ ಹಿಂತಿರುಗಿ ಬರಲಿಲ್ಲ ಎಂದು ತಿಳಿದುಬಂದಿದೆ. ಈ ಘಟನೆಯ ಬಗ್ಗೆ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಮೇಲ್ಕಂಡ ವ್ಯಕ್ತಿ ಕಂಡುಬಂದಲ್ಲಿ ಸುಳ್ಯ ಠಾಣೆಗೆ ತಿಳಿಸುವಂತೆ ಕೋರಲಾಗಿದೆ.