p>

ಸುಬ್ರಹ್ಮಣ್ಯ: ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ 27ನೇ ಚಾತುರ್ಮಾಸ್ಯ

0

ಇಂದಿನಿಂದ ಸಾಂಸ್ಕೃತಿಕ ವೈಭವ -2023 ಆರಂಭ

ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ ಇದರ ಶ್ರೀಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರ 27ನೇ ಚಾತುರ್ಮಾಸ್ಯ ನಡೆಯುತಿದ್ದು ಚಾತುರ್ಮಾಸ್ಯ ಪ್ರಯುಕ್ತ ಆ.13 ರಿಂದ ಆ.21 ರ ವರೆಗೆ ಮಠದ ನವಗ್ರಹ ಮಂಟಪದಲ್ಲಿ ಸಾಂಸ್ಕೃತಿಕ ವೈಭವ -2023 ಕಾರ್ಯಕ್ರಮ ನಡೆಯಲಿದ್ದು ಇಂದು ಶ್ರೀಗಳಿಂದ ದೀಪೋಜ್ವಲನೆ ನಡೆಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಚಾತುರ್ಮಾಸ್ಯ ವ್ತತದ ಕಟ್ಟುಪಾಡು ಹಾಗೂ ಅಧಿಕ ಮಾಸದ ಮಹತ್ವ ಬಗ್ಗೆ ಶ್ರೀಗಳಿಂದ ಆಶೀರ್ವಚನ ನಡೆಯಿತು. ಆ ಬಳಿಕ ಧೀಶಕ್ತಿ ಮಹಿಳಾ ಯಕ್ಷ ಬಳಗ ತೆಂಕಿಲ ಪುತ್ತೂರು ಇವರಿಂದ “ಭೂಮಿಂಜಯ” ಯಕ್ಷಗಾನ ತಾಳಮದ್ದಳೆ ನಡೆಯಿತು.

ಉದ್ಘಾಟನಾ ಸಂದರ್ಭ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ, ಕಲಾವಿದ ಯಜ್ಞೇಶ್ ಆಚಾರ್, ಅನುಗ್ರಹ ಎಜ್ಯಕೇಶನ್ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.