ಚೆಂಬು: ಶ್ರೀ ಭಗವಾನ್ ಸಂಘದಿಂದಸ್ವಚ್ಚತಾ ಕಾರ್ಯಕ್ರಮ

0

ಚೆಂಬು ಊರುಬೈಲ್ ಭಗವಾನ್ ಸಂಘ ಇದರ ಸದಸ್ಯರಿಂದ ರಾಷ್ಟಿಯ ಹೆದ್ದಾರಿ ನಾಮಫಲಕ ಸ್ವಚ್ಛತಾ ಕಾರ್ಯಕ್ರಮ ವು ಕಡೆಪಾಲ ಬಳಿಯಿಂದ ಕೊಯಿನಾಡು ತನಕ ನಡೆಯಿತು.

ಕಾರ್ಯಕ್ರಮದ ಉದ್ಘಾಟಯನ್ನು ವರ್ತಕರ ಸಂಘದ ಅಧ್ಯಕ್ಷ ಯು.ಬಿ. ಚಕ್ರಪಾಣಿ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಸಂಪಾಜೆ ಗ್ರಾ. ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್, ಸುದ್ದಿ ಪತ್ರಿಕೆ ವರದಿಗಾರ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶರತ್ ಕಾಸ್ಪಾಡಿ ಹಾಗೂ ಸಂಘದ ಪದಾಧಿಕಾರಿಗಳು ,ಸುದ್ದಿ ಪ್ರತಿನಿಧಿ ತಾಜುದ್ದೀನ್ ಆರಂತೋಡು ಉಪಸ್ಥಿತರಿದ್ದರು.