ಮೇದಿನಡ್ಕದಲ್ಲಿ ನೂತನ ದ್ಜಜ ಸ್ತಂಭ ಉದ್ಘಾಟನೆ – ಸ್ವಾತಂತ್ರ್ಯ ಮಹೋತ್ಸವ

0

ಅಜ್ಜಾವರದ ಮೇದಿನಡ್ಕದಲ್ಲಿ ಮುತ್ತು ಶ್ರೀ ಫ್ರೆಂಡ್ಸ್ ಕ್ಲಬ್ ಮೇದಿನಡ್ಕ ಹಾಗೂ ಶ್ರೀ ಮುತ್ತು ಮಾರಿಯಮ್ಮ ಸೇವಾ ಸಮಿತಿ ವತಿಯಿಂದ ನೂತನ ದ್ಜಜ ಸ್ತಂಭ ಉದ್ಘಾಟನೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕೆ.ಎಫ್.ಡಿ.ಸಿ ನಿವೃತ್ತ ವಿಭಾಗೀಯ ವ್ಯವಸ್ಥಾಪಕರಾದ ರಂಗನಾಥ್ ರವರು ನೂತನ ದ್ಜಜ ಸ್ತಂಭ ಉದ್ಘಾಟಿಸಿ , ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾಮ ಪಂಚಾಯಿತ್ ಸದಸ್ಯರಾದ, ರವಿರಾಜ್ ಕರ್ಲಪಾಡಿ, ಪ್ರಸಾದ್ ರೈ ಮೇನಾಲ, ದಿವ್ಯ ಪಡ್ಡಂ ಬೈಲು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಮೇಲ್ವಿಚಾರಕಿ ಶ್ರೀಮತಿ ರಜನಿ, ಹಾಗೂ ನಯನ್ ಕುಮಾರ್ ರೈ ಮೇನಾಲ, ಹಿರಿಯರಾದ ದಯಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು,

ವಿನೋದ್ ಮೇದಿನಡ್ಕ ಸ್ವಾಗತಿಸಿ, ರಮೇಶ್ ಮೇದಿನಡ್ಕ ಕಾರ್ಯಕ್ರಮ ನಿರೂಪಿಸಿದರು, ಸಂಜಯ್, ಧನ್ಯವಾದ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ಊರಿನ ಸಮಸ್ತ ನಾಗರಿಕರು ಉಪಸ್ಥಿತರಿದ್ದರು.