ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಶ್ರೀ ಬಸವೇಶ್ವರ ಭಜನಾ ಮಂದಿರ ಹಾಗೂ ಶ್ರೀದೇವಿ ಭಜನಾ ಮಂದಿರದ ಬಳಿ ಶ್ರಮದಾನ

0

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಕಾಂತುಬೈಲು ದಬ್ಬಡ್ಕ ಶ್ರೀ ಬಸವೇಶ್ವರ ಭಜನಾ ಮಂದಿರ ಹಾಗೂ ಚೆಮ್ಬು ಶ್ರೀದೇವಿ ಭಜನಾ ಮಂದಿರದ ಸಮೀಪ ಆಗಸ್ಟ್ 13ರಂದು ಶ್ರಮದಾನದ ಮೂಲಕ ಸ್ವಚ್ಛತೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಚಿನ್ ಕೆದಂಬಾಡಿ, ಸಮಿತಿಯ ಸದಸ್ಯರು ಹಾಗೂ ಯು.ಚೆಂಬು ಒಕ್ಕೂಟದ ಪದಾಧಿಕಾರಿಗಳು ಸದಸ್ಯರು,

ಸೇವಾ ಪ್ರತಿನಿಧಿಗಳು,ಚೆಂಬು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾರ್ಯಪ್ಪ ಹೊಸೂರು,

ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.