ಸುಳ್ಯ ಪೊಲೀಸ್ ಠಾಣೆಯಲ್ಲಿ ಹಿರಿಯ ನಾಗರಿಕರ ಸಂಘದ ಸಲಹಾ ಸೂಚನಾ ಸಭೆ

0

ಸುಳ್ಯ ಆರಕ್ಷಕ ಠಾಣೆಯಲ್ಲಿ ಹಿರಿಯ ನಾಗರಿಕರ ಸಂಘದ ಸಲಹಾ ಸೂಚನಾ ಸಭೆಯು ಆ.20ರಂದು ಜರುಗಿತು. ವೇದಿಕೆಯಲ್ಲಿ ಸುಳ್ಯ ಪೊಲೀಸ್ ಠಾಣಾ ತನಿಖಾ ವಿಭಾಗ ಎಸ್.ಐ. ಸರಸ್ವತಿ, ಎ.ಎಸ್.ಐ. ತಾರನಾಥ ಅವರು ಉಪಸ್ಥಿತರಿದ್ದರು.

ಸುಳ್ಯದ ನೆಹರೂ ಸ್ಮಾರಕ ಕಾಲೇಜಿನ ನಿವೃತ ಪ್ರಾಂಶುಪಾಲ ದಾಮೋದರ ಗೌಡ , ಸುಳ್ಯ ತಾಲೂಕು ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಚೆನ್ನಕೇಶವ ಜಾಲ್ಸೂರು ಅವರು ಹಿರಿಯ ನಾಗರಿಕರ ಸಂಘದ ವತಿಯಿಂದ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಧ್ಯಾಚೇತನ ಹಿರಿಯ ನಾಗರಿಕ ಸಂಘದ ಕೋಶಾಧಿಕಾರಿ ರಾಮಚಂದ್ರ ಗೌಡ ಪೆಲ್ತಡ್ಕ, ಪದಾಧಿಕಾರಿಗಳಾದ ಗೋಪಾಲಕೃಷ್ಣ ಗೌಡ ಮೂರ್ಜೆ, ನ.ಪಂ. ಸದಸ್ಯ ಬುದ್ದನಾಯ್ಕ, ಎಂ.ಎಸ್. ಭಟ್ ಬೆನಕ ಜಾಲ್ಸೂರು, ಬೆಳ್ಯಪ್ಪ ಗೌಡ, ಕೇಶವ ಸಿ.ಎ., , ಸೀತಾರಾಮ ಗೌಡ, ದಿವಾಕರ ರೈ ಕುರಿಯ, ಸುಬ್ರಹ್ಮಣ್ಯ ಹೊಳ್ಳ, ಮೋನಪ್ಪ ಜಟ್ಟಿಪಳ್ಳ, ಶ್ರೀಮತಿ ಪುಷ್ಪಲತ ಉಪಸ್ಥಿತರಿದ್ದರು.