ಕೊಡಿಯಾಲ : ಕಲ್ಪಡ ಶ್ರೀ ಉಳ್ಳಾಕುಲು ದೈವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

0

ಕೊಡಿಯಾಲ ಗ್ರಾಮದ ಶ್ರೀ ಉಳ್ಳಾಕುಲು ದೈವಸ್ಥಾನ ಕಲ್ಪಡದಲ್ಲಿ
ವರ್ಷಂಪ್ರತಿಯಂತೆ, ಕಲ್ಪಡ ಉಳ್ಳಾಕುಲು ಮೂಲಸ್ಥಾನದ ಹತ್ತಿರವಿರುವ ನಾಗದೇವರ ಸನ್ನಿಧಿಯಲ್ಲಿ ಇಂದು ನಾಗರ ಪಂಚಮಿಯ ಉತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು.


ಮೊಕ್ತೇಸರರಾದ ಶಿವರಾಮ ಉಪಾಧ್ಯಾಯರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ರಾಮಚಂದ್ರ ಉಪಾಧ್ಯಾಯ, ಆಡಳಿತ ಸಮಿತಿ ಅಧ್ಯಕ್ಷರಾದ ಕೇಶವ ಕೆ. ಪಿ ಕಲ್ಪಡತೋಟ,
ಉಪಾಧ್ಯಕ್ಷರಾದ ಮನೋಹರ.ಕೆ, ಕಾರ್ಯದರ್ಶಿ ಹರ್ಷನ್ ಕೆಟಿ. ಮಾಜಿ ಅಧ್ಯಕ್ಷರುಗಳಾದ ಭಾಸ್ಕರ ಗೌಡ ಕಲ್ಪಡ ಗುತ್ತು,ಆನಂದ ಗೌಡ ಕಲ್ಪಡ, ಸಮಿತಿಯ ಸರ್ವ ಸದಸ್ಯರು, ಕೂಡು ಕಟ್ಟಿನ 8 ಮನೆಯವರು ಊರಿನ ಗ್ರಾಮಸ್ಥರು, ಭಕ್ತಿ ಮತ್ತು ಶ್ರದ್ಧೆ ಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.