ಜಾತಿ ನಿಂದನೆ ಆರೋಪ : ಆರೋಪಿಗೆ ನ್ಯಾಯಾಂಗ ಬಂಧನ

0

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ದೊಡ್ಡತೋಟ ಮುಂಡೋಕಜೆ ಸಮೀಪ ನವಿಲುಪಣೆ ನಿವಾಸಿ ಸತ್ಯನಾರಾಯಣ ಮಣಿಯಾಣಿ ಎಂಬವರನ್ನು ಪೋಲೀಸರು‌ ಬಂಧಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

ಸತ್ಯನಾರಾಯಣ ಮಣಿಯಾಣಿ ಎಂಬವರು ಮುಂಡೋಕಜೆಯ ನವಿಲುಪಣೆ ಮನೆಯೊಂದಕ್ಕೆ ಹೋಗಿ ದಾಂಧಲೆ ನಡೆಸಿದರೆಂದೂ, ಈ ವೇಳೆ ಆ ಮನೆಯವರ ಸಂಬಂಧಿಕರು ಸತ್ಯನಾರಾಯಣ ರಿಗೆ ಎಚ್ಚರಿಕೆ ನೀಡಿದಾಗ ಸತ್ಯನಾರಾಯಣರು‌ ಜಾತಿ ನಿಂದನೆ ಮಾಡಿದರೆನ್ನಲಾಗಿದೆ.

ಈ‌ ಬಗ್ಗೆ ಬೆಳ್ಳಾರೆ ಪೋಲೀಸರಿಗೆ ವೇದಾವತಿ ಎಂಬವರು ದೂರು‌ ನೀಡಿದ್ದು, ಪೋಲೀಸರು ಸತ್ಯನಾರಾಯಣ ರನ್ನು‌ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನನ್ನು‌ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.