ಅಡ್ಕಾರು : ಹೆದ್ದಾರಿಯಲ್ಲಿ ಹಸು ಸಾವು

0

ವಾರೀಸುದಾರರು ಸ್ಥಳಕ್ಕೆ ಭೇಟಿ ನೀಡುವಂತೆ ಪೊಲೀಸರ ಮನವಿ

ಅಡ್ಕಾರು ಸಮೀಪ ಮಾಣಿ ಮೈಸೂರು ಹೆದ್ದಾರಿಯ ಬಳಿ ಹಸುವೊಂದು ಸತ್ತ ಘಟನೆ ಇದೀಗ ವರದಿಯಾಗಿದೆ.

ಸುಳ್ಯ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸರಸ್ವತಿ ರವರು ಸಿಬ್ಬಂದಿಗಳೊಂದಿಗೆ ಗಸ್ತು ತೆರಳುತ್ತಿದ್ದ ಸಂದರ್ಭ ಹಸು ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದ್ದು
ವಿಚಾರಿಸಿದಾಗ ಬಸ್ ಡಿಕ್ಕಿ ಹೊಡೆದಿರಬಹುದು ಎಂಬ ಶಂಕೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ವೇಳೆ ಉಪನಿರೀಕ್ಷಕರಾದ ಸರಸ್ವತಿಯವರು ಕೂಡಲೆ ಪಶುವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಸುಳ್ಯ ಪಶು ವೈದ್ಯಾಧಿಕಾರಿ ನಿತಿನ್ ಪ್ರಭು ಪರಿಶೀಲಿಸಿ ಹಸು ಮೃತಪಟ್ಟಿರುವ ಬಗ್ಗೆ ದೃಢಪಡಿಸುತ್ತಾರೆ.

ಆದ್ದರಿಂದ ವಾರಿಸುದಾರರು ಯಾರಾದರೂ ಇದ್ದಲ್ಲಿ ಸ್ಥಳಕ್ಕೆ ಭೇಟಿ ನೀಡುವಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.